ಕರ್ನಾಟಕ

karnataka

ETV Bharat / briefs

ಎಕ್ಸ್​ಪ್ರೆಸ್ ಕೆನಾಲ್ ಅಭಿವೃದ್ಧಿ ಪಡಿಸದಿದ್ದರೆ ಕಾನೂನು ಹೋರಾಟ: ಶಾಸಕ ಮಾಧುಸ್ವಾಮಿ - undefined

ಎಕ್ಸ್​ಪ್ರೆಸ್ ಕೆನಾಲ್ ಅಭಿವೃದ್ಧಿಪಡಿಸಿ ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೇಮಾವತಿ ನೀರು ಹರಿಸಲು ಮನವಿ ಮಾಡಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಎಚ್ಚರಿಕೆ ರವಾನಿಸಿದ್ದಾರೆ.

ಶಾಸಕ ಮಾಧುಸ್ವಾಮಿ

By

Published : Jun 19, 2019, 11:44 PM IST

ಬೆಂಗಳೂರು: ಎಕ್ಸ್​ಪ್ರೆಸ್ ಕೆನಾಲ್ ಅಭಿವೃದ್ಧಿಪಡಿಸಿ ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೇಮಾವತಿ ನೀರು ಹರಿಸಲು ಮನವಿ ಮಾಡಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸುವ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳು ಸೇರಿದಂತೆ ಎತ್ತಿನಹೊಳೆ ಯೋಜನೆಯ ಭೂ ಸಂತ್ರಸ್ತರಿಗೆ ನಿಗದಿಪಡಿಸಿದ ಪರಿಹಾರದಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಸರಿಪಡಿಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಮಾಧುಸ್ವಾಮಿ, 240 ಕಿ.ಮೀ. ಕೆನಾಲ್ ಅಭಿವೃದ್ಧಿಪಡಿಸಿ ನೀರು ಹರಿಸಲು ಜಿಲ್ಲೆಯ ಎಲ್ಲ ಶಾಸಕರು ಒಕ್ಕೊರಲಿನಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸುಮಾರು 2000 ಕ್ಯೂಸೆಕ್​ ನೀರನ್ನು ನಾಲೆಗೆ ಹರಿಸಬೇಕು. ಆದರೆ, ಕೇವಲ 70 ಕಿ.ಮೀ. ನಾಲೆ ದುರಸ್ತಿ ಮಾಡಲಾಗಿದೆ. ಕುಣಿಗಲ್, ಮಾಗಡಿ ಕಡೆ ಲಿಂಕ್ ಕೆನಾಲ್ ಮಾಡಿದ್ದಾರೆ. 300 ಕ್ಯೂಸೆಕ್​ ನೀರನ್ನು ಹರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇದರಿಂದ ತುಮಕೂರು ಜಿಲ್ಲೆಯ ಗುಬ್ಬಿ, ತುರುವೇಕೆರೆ ತಾಲೂಕಿಗೆ ನೀರು ಬರುವುದಿಲ್ಲ ಎಂದು ತಿಳಿಸಿದರು.

ನಾಲೆ ಅಭಿವೃದ್ಧಿ ಮಾಡಿ 2000 ಕ್ಯೂಸೆಕ್​ ನೀರು ಹರಿಸಬೇಕೆಂದು ಎಲ್ಲ ಶಾಸಕರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ದಿಢೀರ್​ನೆ ಕ್ಯಾಬಿನೆಟ್​ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. 70 ಕಿ.ಮೀ. ನಾಲೆಯನ್ನು ದುರಸ್ತಿ ಮಾಡಿದರೆ ಇನ್ನೂ 170 ಕಿ.ಮೀ. ನೀರು ಹರಿಯವುದಿಲ್ಲ ಎಂದು ಹೇಳಿದರು.

ಇನ್ನು ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ 24 ಟಿಎಂಸಿಗೆ ಯೋಜನೆ ಮಾಡಿದ್ದಾರೆ. ಆದರೆ, ಭೂಮಿ ವಶಪಡಿಸಿಕೊಳ್ಳುವುದರ ಬಗ್ಗೆ ಇದುವರೆಗೂ ನೋಟಿಸ್ ಕೊಟ್ಟಿಲ್ಲ. ತಿಪಟೂರಿನಲ್ಲಿ 33 ಎಕರೆ, ಚಿಕ್ಕನಾಯಕನಹಳ್ಳಿಯಲ್ಲಿ ಹಾಗೂ ಗುಬ್ಬಿಯಲ್ಲಿ 13 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಬೇಕಿದೆ. ಆದರೆ, ಆ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು. ಅರಸಿಕೆರೆ, ಮಧುಗಿರಿ, ಕೊರಟಗರೆ ತಾಲೂಕುಗಳಿಗೆ ನೀರು ಕೊಡಲಾಗಿದೆ. ಆದರೆ ಇನ್ನೂ 3 ತಾಲೂಕುಗಳಿಗೆ ನೀರು ಕೊಟ್ಟಿಲ್ಲ. ಹಾಗಾಗಿ, ಗುತ್ತಿಗೆ ಪಡೆದು ಎತ್ತಿನಹೊಳೆ ಕಾಮಗಾರಿ ಮಾಡುತ್ತಿದ್ದಾಗ ಪ್ರತಿಭಟನೆ ಮಾಡಿ ನಿಲ್ಲಿಸಲಾಗಿದೆ. ಎಕ್ಸ್​ಪ್ರೆಸ್ ಕೆನಾಲ್ ಅಭಿವೃದ್ಧಿಪಡಿಸಿ ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೇಮಾವತಿ ನೀರು ಹರಿಸಲು ಮನವಿ ಮಾಡಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಮಾಧುಸ್ವಾಮಿ ಎಚ್ಚರಿಕೆ ರವಾನಿಸಿದ್ದಾರೆ.

ಸರ್ಕಾರಕ್ಕೆ ಶಾಸಕ ಮಾಧುಸ್ವಾಮಿ ಎಚ್ಚರಿಕೆ

610 ಕೋಟಿ ರೂ. ವೆಚ್ಚದಲ್ಲಿ ಲಿಂಕ್ ಕೆನಾಲ್: ಶಾಸಕ ಡಾ.ರಂಗನಾಥ್

ಇದೇ ವೇಳೆ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, 3 ಟಿಸಿಎಂ ನೀರು ಕೊಡಿ ಎಂದು ಕೇಳಿದ್ದೇವೆ. ಆದರೆ, ನೀರು ಬರದೇ ಇದ್ದರೆ ನಾವು ಹೇಗೆ ಕೇಳುವುದು. ತುಮಕೂರು ಜಿಲ್ಲೆಗೆ 24.05 ಟಿಎಂಸಿ ನೀರು ಬರಬೇಕಿದೆ. ಅದರಲ್ಲಿ ಕುಣಿಗಲ್ ತಾಲೂಕಿಗೆ 3.05 ಟಿಎಂಸಿ ನೀರು ಬರಬೇಕಿದೆ. ಲಿಂಕ್ ಕೆನಾಲ್​ನಲ್ಲಿ ತೆಗೆದುಕೊಂಡು ಹೋಗುತ್ತೇವೆ. 610 ಕೋಟಿ ರೂ. ವೆಚ್ಚದಲ್ಲಿ ಲಿಂಕ್ ಕೆನಾಲ್ ಮಾಡಲು ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.

For All Latest Updates

TAGGED:

ABOUT THE AUTHOR

...view details