ಕರ್ನಾಟಕ

karnataka

ETV Bharat / briefs

ತಡೆಯಾಜ್ಞೆ ಅರ್ಜಿ ವಜಾ... ಈದ್ ಹಬ್ಬಕ್ಕೆ 'ಭಾರತ್' ರಿಲೀಸ್ ಪಕ್ಕಾ..! - ದೆಹಲಿ ಹೈಕೋರ್ಟ್

ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ವಿಕಾಸ್ ತ್ಯಾಗಿ, ಭಾರತ್ ಎನ್ನುವ ಪದವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿ, ಚಿತ್ರದ ಟೈಟಲ್​ನ ಬದಲಿಸುವಂತೆ ಸಿನಿಮಾ ತಂಡಕ್ಕೆ ಸೂಚಿಸುವಂತೆ ಮನವಿ ಮಾಡಿದ್ದರು.

ಭಾರತ್

By

Published : Jun 3, 2019, 9:39 PM IST

ನವದೆಹಲಿ:ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭಾರತ್​ ಬಿಡುಗಡೆಗೆ ತಡೆಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ವಜಾಗೊಳಿಸಿದೆ.

ಜಸ್ಟೀಸ್​ ಜೆ ಆರ್‌ ಮಿಧಾ ಹಾಗೂ ಚಂದೆರ್ ಶೇಖರ್​ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಅರ್ಜಿದಾರರು ಕೇವಲ ಟ್ರೇಲರ್​​ ಮಾತ್ರ ನೋಡಿದ್ದು, ಪೂರ್ಣ ಸಿನಿಮಾ ವೀಕ್ಷಿಸಿಲ್ಲ. ಅಲ್ಲದೆ ಈ ಅರ್ಜಿ ಅಪಕ್ವವಾಗಿದೆ ಎಂದು ಅಭಿಪ್ರಾಯಕ್ಕೆ ಬಂದ ಪೀಠ ಅರ್ಜಿಯನ್ನು ತಳ್ಳಿಹಾಕಿದೆ. ಈ ಮೂಲಕ ಭಾರತ್ ಸಿನಿಮಾ ಬಿಡುಗಡೆಗೆ ಇದ್ದ ಆತಂಕ ದೂರವಾಗಿದೆ.ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ವಿಕಾಸ್ ತ್ಯಾಗಿ, ಭಾರತ್ ಎನ್ನುವ ಪದವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿ, ಚಿತ್ರದ ಟೈಟಲ್‌ನ ಬದಲಿಸುವಂತೆ ಸಿನಿಮಾ ತಂಡಕ್ಕೆ ಸೂಚಿಸುವಂತೆ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆಯ ವೇಳೆ ಪೀಠ ಭಾರತ್ ಸಿನಿಮಾದ ಟ್ರೇಲರ್‌ನ ಕೋರ್ಟ್​ ರೂಮ್​ನಲ್ಲಿ ವೀಕ್ಷಣೆ ಮಾಡಿದೆ. ಟ್ರೇಲರ್​​ನಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರಗಳಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್​​ ಅಭಿನಯದ ಭಾರತ್ ಸಿನಿಮಾ ಕೊರಿಯನ್​​ ಚಿತ್ರ 'ಆನ್​ ಓಡ್​​ ಟು ಮೈ ಫಾದರ್'ನ ರಿಮೇಕ್ ಆಗಿದ್ದು, ಇದೇ ಬುಧವಾರ(ಜೂನ್​5) ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಈದ್ ಹಬ್ಬದ ಅಂಗವಾಗಿ ಭಾರತ್ ಸಿನಿಮಾ ಶುಕ್ರವಾರದ ಬದಲಾಗಿ ಬುಧವಾರವೇ ಥಿಯೇಟರ್ ಅಂಗಳಕ್ಕೆ ಕಾಲಿಡಲಿದೆ.

ABOUT THE AUTHOR

...view details