ಕರ್ನಾಟಕ

karnataka

ETV Bharat / briefs

ಬೋನಿಗೆ ಬಿದ್ದ ಗಂಡು ಚಿರತೆ.. ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - ಬೋನು, ಗಂಡು ಚಿರತೆ, ನಿಟ್ಟುಸಿರು, ಗ್ರಾಮಸ್ಥರು

ಹಾರುಪುರ ಗ್ರಾಮದ ಹೊರವಲಯದಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ‌ ಭೀತಿ ಉಂಟುಮಾಡಿದ್ದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಚಿರತೆ

By

Published : Jun 4, 2019, 12:01 AM IST

ಮೈಸೂರು:‌ ಹೆಚ್.ಡಿ.ಕೋಟೆ ತಾಲೂಕಿನ ಹಾರುಪುರ ಗ್ರಾಮದ ಹೊರವಲಯದಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ‌ ಭೀತಿ ಉಂಟುಮಾಡಿದ್ದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಹಾರುಪುರ ಗ್ರಾಮದ ಆಸುಪಾಸಿನಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಭಯಮೂಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಂತೆ ಕಳೆದ 4 ದಿನದ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಸ್ಥರ‌ ಮನವಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ರಾಮಕೃಷ್ಣ ಎಂಬುವರ ಜಮೀನಿನಲ್ಲಿ ಬೋನ್ ಇರಿಸಿದ್ದರು.

ಬೋನಿಗೆ ಬಿದ್ದ ಗಂಡು ಚಿರತೆ..

ಈ ಬೋನಿಗೆ ಗಂಡು ಚಿರತೆ ಬಿದ್ದಿದ್ದು, ಸ್ಥಳಾಂತರ ಮಾಡುವಾಗ ಗಾಬರಿಗೊಂಡ ಚಿರತೆ ತಪ್ಪಿಸಿಕೊಳ್ಳಲು ಯತ್ನಿಸಿ ತಲೆಗೆ ತೀವ್ರತರದ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details