ಕರ್ನಾಟಕ

karnataka

ETV Bharat / briefs

ಸ್ಥಳೀಯ ನಾಯಕರಿಗೆ ಹಣ ಹಂಚಿಕೆ: ಡಿಕೆಶಿ ವಿರುದ್ಧ ಇಸಿಗೆ ಪತ್ರ ಬರೆದ ಬಿಜೆಪಿ - BJP writes to Karnataka

ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೊಡಿರುವ ಡಿಕೆ ಶಿವಕುಮಾರ್​ ಹೋಟೆಲ್​ವೊಂದರಲ್ಲಿ ಹಣ ಹಂಚಿಕೆ ಮಾಡಿದ್ದಾರೆಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಡಿಕೆ ಶಿವಕುಮಾರ್​

By

Published : May 13, 2019, 5:51 PM IST

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯನ್ನ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಈ ಮಧ್ಯೆ, ಕಾಂಗ್ರೆಸ್​ ನಾಯಕ ಡಿ.ಕೆ. ಶಿವಕುಮಾರ್​ ಸ್ಥಳೀಯ ನಾಯಕರಿಗೆ ಹೋಟೆಲ್​ ಒಂದರಲ್ಲಿ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಷ್ಟೇ ಅಲ್ಲ ಈ ಬಗ್ಗೆ ಚುನಾವಣೆ ಆಯೋಗಕ್ಕೆ ಪತ್ರವನ್ನೂ ಬರೆದಿದೆ.

ಪತ್ರದಲ್ಲಿ ಏನಿದೆ?
ಸಚಿವ ಡಿ.ಕೆ ಶಿವಕುಮಾರ್ ಮತದಾರರು ಮತ್ತು ಸ್ಥಳೀಯ ನಾಯಕರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ

ಪ್ರಸ್ತುತ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣ ಎದುರಿಗಿರುವ ಕಾಟನ್​ ಕಂಟ್ರಿ ಹೋಟೆಲ್​​​ನಲ್ಲಿ ತಂಗಿದ್ದಾರೆ. ಇಲ್ಲಿಂದಲೇ ಕುಂದಗೋಳದ ಮತದಾರರು ಹಾಗೂ ಅಲ್ಲಿನ ನಾಯಕರಿಗೆ ಹಣದ ಹಂಚಿಕೆ ಮಾಡುತ್ತಿದ್ದಾರೆ. ಇದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಪತ್ರ ಆರೋಪಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

For All Latest Updates

ABOUT THE AUTHOR

...view details