ಕರ್ನಾಟಕ

karnataka

ETV Bharat / briefs

ಬಸವ ಜಯಂತಿ: ಸಾಧಕರಿಗೆ 'ಕಾಯಕ ರತ್ನ', 'ದಾಸೋಹ ರತ್ನ' ಪ್ರಶಸ್ತಿ ವಿತರಣೆ - undefined

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್​. ಮಂಜುನಾಥ್​ ಅವರಿಗೆ 'ಕಾಯಕ ರತ್ನ', ಇನ್ಫೋಸಿಸ್​ ಫೌಂಡೇಷನ್​ ಮುಖ್ಯಸ್ಥೆ ಡಾ. ಸುಧಾ ಎನ್​. ಮೂರ್ತಿ ಅವರಿಗೆ 'ದಾಸೋಹ ರತ್ನ' (ಅನುಪಸ್ಥಿತಿ) ಹಾಗೂ ಡಾ.ಜೆ.ಎಸ್​. ಖಂಡೇರಾವ್​, ಎಚ್​.ಎ. ಸ್ವಾಮಿ, ಜಿ.ಎನ್​. ಬಸವರಾಜಪ್ಪ ಅವರಿಗೆ 'ಬಸವ ವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಧಕರಿಗೆ 'ಕಾಯಕ ರತ್ನ' ಪ್ರಶಸ್ತಿ ವಿತರಣೆ

By

Published : May 8, 2019, 3:55 AM IST

ಬೆಂಗಳೂರು: ಬಸವ ಸಮಿತಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರಿಗೆ 'ಕಾಯಕ ರತ್ನ', 'ದಾಸೋಹ ರತ್ನ' ಹಾಗೂ 'ಬಸವ ವಿಭೂಷಣ' ಪ್ರಶಸ್ತಿ ವಿತರಿಸಲಾಯಿತು.

ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್​. ಮಂಜುನಾಥ್​ ಅವರಿಗೆ 'ಕಾಯಕ ರತ್ನ', ಇನ್ಫೋಸಿಸ್​ ಫೌಂಡೇಷನ್​ ಮುಖ್ಯಸ್ಥೆ ಡಾ. ಸುಧಾ ಎನ್​. ಮೂರ್ತಿ ಅವರಿಗೆ 'ದಾಸೋಹ ರತ್ನ' (ಅನುಪಸ್ಥಿತಿ) ಹಾಗೂ ಡಾ.ಜೆ.ಎಸ್​. ಖಂಡೇರಾವ್​, ಎಚ್​.ಎ. ಸ್ವಾಮಿ, ಜಿ.ಎನ್​. ಬಸವರಾಜಪ್ಪ ಅವರಿಗೆ 'ಬಸವ ವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಬಿಬಿಎಂಪಿ ಮೇಯರ್​ ಗಂಗಾಂಬಿಕೆ ಮಲ್ಲಿಕಾರ್ಜುನ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸೂಫಿ ಸಂತ ಇಬ್ರಾಹಿಂದ ಸುತಾರ ಸೇರಿದಂತೆ ಮತ್ತಿತರರಿದ್ದರು.

For All Latest Updates

TAGGED:

ABOUT THE AUTHOR

...view details