ಕರ್ನಾಟಕ

karnataka

ETV Bharat / briefs

ಕಲಬುರಗಿಗೆ ಆ್ಯಂಬುಲೆನ್ಸ್​-ಆಮ್ಲಜನಕ ಸಾಂದ್ರಕ ಕೊಡುಗೆ ನೀಡಿದ ಬಿ ವೈ ವಿಜಯೇಂದ್ರ - ಬಿ ವೈ ವಿಜಯೇಂದ್ರ ವಿವಾದ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಲಬುರಗಿ ಜಿಲ್ಲೆಗೆ ಆ್ಯಂಬುಲೆನ್ಸ್ ಮತ್ತು ಐದು ಆಮ್ಲಜನಕ ಸಾಂದ್ರಕಗಳನ್ನು 'ಮೈ ಸೇವಾ' ತಂಡದ ಮೂಲಕ ಕೊಡುಗೆ ನೀಡಿದ್ದಾರೆ.

ಬಿ ವೈ ವಿಜಯೇಂದ್ರ ಕೊಡುಗೆ
ಬಿ ವೈ ವಿಜಯೇಂದ್ರ ಕೊಡುಗೆ

By

Published : May 30, 2021, 10:16 PM IST

ಕಲಬುರಗಿ:ಮಹಾಮಾರಿ ಕೊರೊನಾದಿಂದ ಸಂಕಷ್ಟದಲ್ಲಿರುವ ಜಿಲ್ಲೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಂದು ಆ್ಯಂಬುಲೆನ್ಸ್ ಮತ್ತು ಐದು ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ.

'ಮೈ ಸೇವಾ' ತಂಡದ ಮೂಲಕ ಆ್ಯಂಬುಲೆನ್ಸ್ ಮತ್ತು ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಡಲಾಗಿದೆ. ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಹಾಗೂ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ತೆಗನೂರ ಆ್ಯಂಬುಲೆನ್ಸ್ ಹಾಗೂ ಆಮ್ಲಜನಕ ಸಾಂದ್ರಕಗಳನ್ನು ಪಡೆದುಕೊಂಡರು.

ಈ ವೇಳೆ‌ ಮಾತನಾಡಿದ ಪ್ರವೀಣ ತೆಗನೂರ, "ಬಿ ವೈ ವಿಜಯೇಂದ್ರ ಅವರ ಮಾರ್ಗದರ್ಶನದಂತೆ ಇಂದಿನಿಂದಲೇ ಕೆಲಸ ಆರಂಭಿಸಲಾಗುವುದು. ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ತೆರಳಿ ಸಹಾಯ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಆ್ಯಂಬುಲೆನ್ಸ್ ಅವಶ್ಯಕತೆ ಇದ್ದಲ್ಲಿ, ಶರಣು ಸಜ್ಜನಶೆಟ್ಟಿ(9986176909) ಹಾಗೂ ಆಮ್ಲಜನಕ ಸಾಂದ್ರಕಗಳ ಸೇವೆ ಪಡೆಯಲು ಶಂಭು ಪಾಟೀಲ್(9916542222) ಮೊಬೈಲ್ ಸಂಖ್ಯೆಗೆ ಕರೆ‌ಮಾಡಿ ಎಂದು ತೆಗನೂರ ಹೇಳಿದ್ದಾರೆ.

ABOUT THE AUTHOR

...view details