ಕರ್ನಾಟಕ

karnataka

ETV Bharat / briefs

ಪ್ರಯಾಣಿಕರ ಸಂಖ್ಯೆ ಇಳಿಮುಖ: ಆಟೋ ಚಾಲಕರ ಪ್ರತಿಭಟನೆ

ಶಿವಮೊಗ್ಗದಲ್ಲಿ ನಿಗದಿತ ಸಮಯಕ್ಕೆ ಸಿಟಿ ಬಸ್​ಗಳು ಸಂಚರಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಶನಿವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

By

Published : May 18, 2019, 8:57 PM IST

ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ಆಟೋ ಚಾಲಕರು

ಶಿವಮೊಗ್ಗ: ನಗರದ ಸಿಟಿ ಬಸ್​ಗಳು ನಿಗದಿತ ಸಮಯಕ್ಕಿಂತ ಮೊದಲೇ ಹೋಗುತ್ತಿರುವುದರಿಂದ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿದಿದೆ. ಆದ್ದರಿಂದ ನಿಗದಿತ ವೇಳೆಗೆ ಬಸ್​ಗಳು ಸಂಚರಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ರಸ್ತೆಗಳಲ್ಲಿ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸಿ ಶನಿವಾರ ಪ್ರತಿಭಟನೆ ನಡೆಸಿದರು.

ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ಆಟೋ ಚಾಲಕರು

ನಿಗದಿತ ಸಮಯಕ್ಕೆ ಬಸ್​ಗಳು ಸಂಚರಿಸುವುದರಿಂದ ಕೆಲವು ಪ್ರಯಾಣಿಕರು ಆಟೋದಲ್ಲಿ ತೆರಳುತ್ತಾರೆ. ನಾವೆಲ್ಲ ಇದೇ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಮನಸೋ ಇಚ್ಛೆ ಬಸ್​ಗಳು ಸಂಚರಿಸುವುದರಿಂದ ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಚಾಲಕರ ಅಳಲಾಗಿದೆ.

ನಮ್ಮ ಆದಾಯಕ್ಕೆ ಕುತ್ತು ಬಂದಿದೆ. ಕೂಡಲೇ ನಗರದ ಸಿಟಿ ಬಸ್​ಗಳ ಸಂಚಾರಕ್ಕೆ ನಿಗದಿತ ವೇಳಾಪಟ್ಟಿ ಹಾಕಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details