ಕರ್ನಾಟಕ

karnataka

ETV Bharat / briefs

ಸೋದರಿಯರ ಮೇಲಿನ ರೇಪ್‌ ಕೇಸ್ : ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ! - ಜೀವಾವಧಿ ಶಿಕ್ಷೆ

ಸೂರತ್​ ಮೂಲದ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತಿರುವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶಿಸಿದೆ.

ಅಸಾರಾಂ ಬಾಪು ಪುತ್ರ

By

Published : Apr 30, 2019, 7:27 PM IST

ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಗುಜರಾತ್​ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದೆ.

ಸೂರತ್​ನ ಸೆಷನ್​ ಕೋರ್ಟ್​ ಈ ತೀರ್ಪು ಹೊರಡಿಸಿದ್ದು, 1ಲಕ್ಷ ದಂಡ ಕೂಡ ವಿಧಿಸಿದೆ. ಇವರ ಜತೆಗೆ ಇತರೆ ಆರೋಪಿಗಳಾಗಿರುವ ಗಂಗಾ, ಜಮುನಾ ಹಾಗೂ ಹನುಮಾನ್‌ಗೆ 10 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದ್ದು, 10 ಸಾವಿರ ದಂಡ ಹಾಕಿದೆ.

ಸೂರತ್​ ಮೂಲದ ಇಬ್ಬರು ಸಹೋದರಿಯರು ತಮ್ಮ ಮೇಲೆ ಸ್ವಯಂಘೋಷಿತ ದೇವ ಮಾನವ ನಾರಾಯಣ ಸಾಯಿ ಅತ್ಯಾಚಾರವೆಸಗಿರುವುದಾಗಿ ಆರೋಪಿಸಿ ಕೋರ್ಟ್​ ಮೆಟ್ಟಿಲೇರಿದ್ದರು. 2002 ಹಾಗೂ 2005ರ ಮಧ್ಯೆ ತಮ್ಮ ಮೇಲೆ ನಾರಾಯಣ ಸಾಯಿ ಅತ್ಯಾಚಾರಗೈದಿದ್ದಾಗಿ ಆರೋಪಿಸಿ, 2013ರಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇವರು ಅಸಾರಾಂ ಬಾಪು ಆಶ್ರಮದಲ್ಲಿದ್ದರು. 2013ರಲ್ಲಿ ಅಸಾರಾಂ ಬಾಪು ಪುತ್ರ 2013ರಲ್ಲಿ ಬಂಧನವಾಗಿ ಜೈಲಿನಲ್ಲಿದ್ದಾನೆ.

ABOUT THE AUTHOR

...view details