ಮಂಡ್ಯ: ಆಶಾಕಾರ್ಯತರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪಾಂಡವಪುರ ತಾಲೂಕಿನ ಎರೇಗೌಡನಕೊಪ್ಪಲು ಗ್ರಾಮದಲ್ಲಿ ಜರುಗಿದೆ.
ಆಶಾಕಾರ್ಯಕರ್ತೆಯರ ಮೇಲೆ ದಬ್ಬಾಳಿಕೆ ಮಾಡಿದ್ದವರ ಬಂಧನ.. ಖಡಕ್ ವಾರ್ನಿಂಗ್ - Eregowdukoppalu
ಎರೇಗೌಡನಕೊಪ್ಪಲು ಗ್ರಾಮದಲ್ಲಿ ಇಂದು ಕೋವಿಡ್ ಸೋಂಕಿತ ಸಾವನಪ್ಪಿದ್ದು, ಆ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಕಾರ್ಯಕರ್ತರು ತಪಾಸಣೆ ನಡೆಸಿ ಬುದ್ದಿವಾದ ಹೇಳಿದಕ್ಕೆ ಜನರು ದಬ್ಬಾಳಿಕೆ ನಡೆಸಿದ್ದಾರೆ.
![ಆಶಾಕಾರ್ಯಕರ್ತೆಯರ ಮೇಲೆ ದಬ್ಬಾಳಿಕೆ ಮಾಡಿದ್ದವರ ಬಂಧನ.. ಖಡಕ್ ವಾರ್ನಿಂಗ್ Arrested of those who tyrannize over health activist](https://etvbharatimages.akamaized.net/etvbharat/prod-images/768-512-09:39:10:1623427750-kn-mnd-11-08-arreste-avb-ka10026-11062021191038-1106f-1623418838-270.jpg)
Arrested of those who tyrannize over health activist
ಎರೇಗೌಡನಕೊಪ್ಪಲು ಗ್ರಾಮದಲ್ಲಿ ಒಂದೇ ದಿನ 25 ಪ್ರಕರಣ ಪತ್ತೆಯಾಗಿವೆ. ಅಲ್ಲದೇ ಇಂದು ಕೋವಿಡ್ ಸೋಂಕಿತ ಸಾವನ್ನಪ್ಪಿದ್ದು, ಆ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಈ ವೇಳೆ, ಆಶಾ ಕಾರ್ಯಕರ್ತರು ತಪಾಸಣೆ ನಡೆಸಿ ಬುದ್ದಿವಾದ ಹೇಳಿದಕ್ಕೆ ದಬ್ಬಾಳಿಕೆ ನಡೆಸಿದ್ದಾರೆ.
ದಬ್ಬಾಳಿಕೆ ಮಾಡಿದ ಗ್ರಾಮದ ಮೂವರು ವ್ಯಕ್ತಿಗಳ ಮೇಲೆ ತಹಶೀಲ್ದಾರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗ್ರಾಮಕ್ಕೆ ಭೇಟಿ ನೀಡಿ ಮೂವರನ್ನ ಬಂಧಿಸಿದ್ದಾರೆ. ಗ್ರಾಮದಲ್ಲಿ ಯಾರಾದರೂ ಕೋವಿಡ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.