ಕರ್ನಾಟಕ

karnataka

ETV Bharat / briefs

ಅಣ್ಣಾಮಲೈ ರಾಜೀನಾಮೆ ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ: ಟಿ.ಸುನೀಲ್​ - etv bharata

ಡಿಸಿಪಿ ಅಣ್ಣಾಮಲೈ ರಾಜೀನಾಮೆಯಿಂದ ಪೊಲೀಸ್​ ಇಲಾಖೆಗೆ ತುಂಬದ ನಷ್ಟವಾಗಿದೆ. ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಿರಲಿ ಎಂದು ನಗರ ಪೊಲೀಸ್​ ಆಯುಕ್ತ ಟಿ.ಸುನೀಲ್​ ಕುಮಾರ್​ ಶುಭಾ ಕೋರಿದ್ದಾರೆ.

ಟಿ.ಸುನೀಲ್​ ಕುಮಾರ್

By

Published : May 28, 2019, 5:02 PM IST

ಬೆಂಗಳೂರು: ಅಣ್ಣಾಮಲೈ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಎಲ್ಲೇ ಹೋದರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ನಗರ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದರು.

ಟಿ.ಸುನೀಲ್​ ಕುಮಾರ್, ಬೆಂಗಳೂರು ನಗರ ಪೊಲೀಸ್​ ಆಯುಕ್ತ


ದಕ್ಷ ಅಧಿಕಾರಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಅಣ್ಣಾಮಲೈ ಅಂತಹ ಅಧಿಕಾರಿ ನಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆಯ ವಿಷಯ. ಅವರ ರಾಜೀನಾಮೆ ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ ಎಂದರು.

ಅಣ್ಣಾಮಲೈ ಅವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಿರಲಿ. ಸಮಾಜ ಸೇವೆ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ತಮ್ಮ ಜೀವನ ಕಟ್ಟಿಕೊಂಡರೂ ಸಹ ಅವರ ಪ್ರಾಮಾಣಿಕತೆ ಅವರಿಗೆ ಶ್ರೀರಕ್ಷೆಯಾಗಿರುತ್ತದೆ ಎಂದು ಟಿ. ಸುನೀಲ್​ಕುಮಾರ್​ ಶುಭ ಕೋರಿದರು.

ABOUT THE AUTHOR

...view details