ಕರ್ನಾಟಕ

karnataka

ಮನಸ್ಸೆಲ್ಲಾ ನೀನೇ ಧಾರಾವಾಹಿ ನಾಯಕ ಸುಜಿತ್ ಗೌಡಗೆ ಕೊರೊನಾ ಪಾಸಿಟಿವ್

By

Published : May 4, 2021, 11:03 PM IST

ಮನಸ್ಸೆಲ್ಲಾ ನೀನೇ ಧಾರಾವಾಹಿಯಲ್ಲಿ ನಾಯಕ ಸುಜಿತ್ ಗೌಡಗೆ ಕೊರೊನಾ ಪಾಸಿಟಿವ್. ಈ ವಿಚಾರವನ್ನು ಸ್ವತಃ ಸುಜಿತ್ ಅವರೇ ತಮ್ಮ ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ.

sujith gowda
sujith gowda

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸ್ಸೆಲ್ಲಾ ನೀನೇ ಧಾರಾವಾಹಿಯಲ್ಲಿ ನಾಯಕ ರಾಕ್ ಸ್ಟಾರ್ ಅರುಣ್ ಆಗಿ ಅಭಿನಯಿಸುತ್ತಿರುವ ಸುಜಿತ್ ಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಈ ವಿಚಾರವನ್ನು ಸ್ವತಃ ಸುಜಿತ್ ಅವರೇ ತಮ್ಮ ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ. "ನನಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಇದೀಗ ಕೊರೊನಾ ಬಂದಿರುವ ಕಾರಣ ನಾನು ಐಸೋಲೇಶನ್​ನಲ್ಲಿದ್ದೇನೆ. ಮಾತ್ರವಲ್ಲ ಅಗತ್ಯ ಇರುವಂತಹ ಚಿಕಿತ್ಸೆಯನ್ನು ಮನೆಯಲ್ಲಿ ಇದ್ದುಕೊಂಡು ಪಡೆಯುತ್ತಿದ್ದೇನೆ. ಕಳೆದ ಒಂದು ವಾರದಿಂದ ಯಾರೆಲ್ಲಾ ನನ್ನ ಸಂಪರ್ಕ ಮಾಡಿದ್ದೀರೋ ಅವರೆಲ್ಲಾ ದಯಮಾಡಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

"ಕೊರೊನಾದಿಂದ ಬಳಲುವುದು ನಿಜವಾಗಿಯೂ ತುಂಬಾ ಕಷ್ಟದ ಕೆಲಸ. ಅದು ಬಂದವರಿಗಷ್ಟೇ ಅದರ ಕಷ್ಟ ಗೊತ್ತು. ಅದೇ ಕಾರಣದಿಂದ ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದು ಒಂದೇ, ಕಡ್ಡಾಯವಾಗಿ ಮಾಸ್ಕ್ ಧರಿಸಿ. ಆಗಾಗ ಕೈಗಳನ್ನು ಸ್ಯಾನಿಟೈಸ್ ಮಾಡಿ. ದಯವಿಟ್ಟು ಅಗತ್ಯ ಇಲ್ಲವೆಂದಾದರೆ ಮನೆಯಿಂದ ಹೊರಗೆ ಹೋಗಬೇಡಿ" ಎಂದು ಹೇಳಿದ್ದಾರೆ ಸುಜಿತ್ ಗೌಡ.

ABOUT THE AUTHOR

...view details