ಕರ್ನಾಟಕ

karnataka

ETV Bharat / briefs

ಧೂಳು ಬಿರುಗಾಳಿ, ಮಿಂಚಿನ ಹೊಡೆತಕ್ಕೆ 'ಉತ್ತರ' ತತ್ತರ! 26 ಸಾವು 57 ಜನರಿಗೆ ಗಾಯ - ಉತ್ತರ ಪ್ರದೇಶ

ಮೈನ್​ಪುರಿ, ಮೊರಾದಬಾದ್, ಬದೌನ್​​, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ 26 ಜನ ಪ್ರಾಣ ಬಿಟ್ಟಿದ್ದಾರೆ.

ಧೂಳು ಬಿರುಗಾಳಿ

By

Published : Jun 7, 2019, 9:58 PM IST

ಲಖನೌ:ತೀವ್ರ ಧೂಳಿನ ಬಿರುಗಾಳಿ ಹಾಗೂ ಮಿಂಚಿನ ಆರ್ಭಟಕ್ಕೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ 26 ಮಂದಿ ಸಾವನ್ನಪ್ಪಿದ್ದು, 57 ಜನ ಗಾಯಗೊಂಡಿದ್ದಾರೆ.

ಮೈನ್​ಪುರಿ, ಮೊರಾದಬಾದ್, ಬದೌನ್​​, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ 26 ಜನ ಪ್ರಾಣ ಬಿಟ್ಟಿದ್ದಾರೆ.

ಬಿರುಗಾಳಿಯ ಪರಿಣಾಮ ಹಲವಾರು ಮರಗಳು ನೆಲಕ್ಕುರುಳಿವೆ. ಘಟನೆಯಲ್ಲಿ 16 ಮನೆಗಳು ಜಖಂಗೊಂಡಿವೆ. ಮೈನ್​ಪುರಿ ಜಿಲ್ಲೆಯೊಂದರಲ್ಲೇ 41 ಮಂದಿ ಗಾಯಗೊಂಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್,​ ಜಿಲ್ಲಾಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಾವನ್ನಪ್ಪಿದ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details