ಕರ್ನಾಟಕ

karnataka

By

Published : May 16, 2021, 8:04 PM IST

ETV Bharat / briefs

ಮಂಡ್ಯದಲ್ಲಿ ಕೊರೊನಾ ಮರಣ ಮೃದಂಗ.. ಒಂದೇ ದಿನ 15 ಬಲಿ

ಜಿಲ್ಲೆಯಲ್ಲಿಂದು 1196 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 42,370 ಮಂದಿ ಚೇತರಿಕೆಗೊಂಡು ಬಿಡುಗಡೆಗೊಂಡಿದ್ದಾರೆ..

Mandya
Mandya

ಮಂಡ್ಯ :ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು, ಕೋವಿಡ್‌ಗೆ ಇಂದು ಒಂದೇ ದಿನ 15 ಮಂದಿ ಬಲಿ ಪಡೆಯುವ ಮೂಲಕ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸಾವಿನ ಸಂಖ್ಯೆ 348 ಏರಿಕೆಯಾಗಿದೆ. ಜಿಲ್ಲೆಯಲ್ಲಿಂದು 709 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 50,592ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7872 ತಲುಪಿದೆ.

ಜಿಲ್ಲೆಯಲ್ಲಿಂದು 1196 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 42,370 ಮಂದಿ ಚೇತರಿಕೆಗೊಂಡು ಬಿಡುಗಡೆಗೊಂಡಿದ್ದಾರೆ.

ತಾಲೂಕುವಾರು ಪ್ರಕರಣಗಳ ವಿವರ :ಮಂಡ್ಯ 159, ಮದ್ದೂರು 112, ಮಳವಳ್ಳಿ 102, ಪಾಂಡವಪುರ 123, ಶ್ರೀರಂಗಪಟ್ಟಣ 31, ಕೆ.ಆರ್.ಪೇಟೆ 89, ನಾಗಮಂಗಲ 89, ಹೊರ ಜಿಲ್ಲೆಯ 4 ಪ್ರಕರಣ ದಾಖಲಾಗಿವೆ.

ABOUT THE AUTHOR

...view details