ಹೈದರಾಬಾದ್ (ತೆಲಂಗಾಣ): ಭಾರತೀಯ ಸೇನೆ ಸೇರಬೇಕು ಎನ್ನುವುದು ಬಹುತೇಕ ಯುವಕರ ಕನಸು. ಒಂದಲ್ಲೊಂದು ದಿನ ಭಾರತೀಯ ಯೋಧನಾಗಬೇಕೆಂದು ಅದೆಷ್ಟೋ ಯುವಕರು ಪ್ರಯತ್ನಪಡುತ್ತಲೇ ಇರುತ್ತಾರೆ. ಇಂತಹ ಅನೇಕ ಯುವಕರಲ್ಲಿ ಒಬ್ಬ ತೆಲಂಗಾಣದ ರಾಕೇಶ್. ವಿಪರ್ಯಾಸವೆಂದರೆ, ಈತ ಸೇನಾ ನೇಮಕಾತಿ ವಿವಾದವಾಗಿಯೇ ನಡೆದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಸೇನಾ ಭರ್ತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಯೋಜನೆ 'ಅಗ್ನಿಪಥ್' ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಯೋಜನೆಯಡಿ ನಿಗದಿ ಮಾಡಿರುವ ವಯೋಮಿತಿ ಸೇನಾ ಆಕಾಂಕ್ಷಿಗಳ ಕಣ್ಣು ಕೆಂಪಗಾಗಿಸಿದೆ. ಆದ್ದರಿಂದ ಈಗಾಗಲೇ ಭಾರತೀಯ ಸೇನೆ ಸೇರಬೇಕು ಮತ್ತು ಭಾರತೀಯ ಯೋಧನಾಗಬೇಕೆಂದು ಆಸೆ ಹೊಂದಿದ್ದ ಯುವಕರು ಹೊಸ ಯೋಜನೆಯನ್ನು ಖಂಡಿಸಿ ರಸ್ತೆಗಿಳಿದಿದ್ದಾರೆ.
ಶುಕ್ರವಾರ ತೆಲಂಗಾಣದಲ್ಲೂ ಪ್ರತಿಭಟನೆ ಜೋರಾಗಿತ್ತು. ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಯೋಜನೆ ವಿರೋಧಿಸಿ ನೂರಾರು ಯುವಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹಿಂಸಾರೂಪ ಪಡೆದು ರಾಕೇಶ್ನನ್ನು ಬಲಿ ಪಡೆಯಿತು. ಇದು 'ಅಗ್ನಿಪಥ' ಯೋಜನೆ ಸಂಬಂಧ ದೇಶದಲ್ಲಿ ನಡೆದ ಸಾವು ಕೂಡ ಹೌದು.
ಸೇನೆಗೆ ಆಯ್ಕೆಯಾಗಿದ್ದ ರಾಕೇಶ್: ವಾರಂಗಲ್ ಜಿಲ್ಲೆಯ ದಾಬೀರಪೇಟ್ ಗ್ರಾಮದ ನಿವಾಸಿ, 22 ವರ್ಷದ ಡಿ.ರಾಕೇಶ್ ಅಂತಿಮ ವರ್ಷದ ಪದವಿ ಓದುತ್ತಿದ್ದ. ಕಳೆದ ಆರು ದಿನಗಳ ಹಿಂದೆ ನಡೆದ ಸೇನಾ ಭರ್ತಿಯಲ್ಲಿ ಆಯ್ಕೆಯಾಗಿದ್ದ. ಲಿಖಿತ ಪರೀಕ್ಷೆಗಾಗಿ ತಯಾರಿಯಲ್ಲಿದ್ದ. ಆದರೆ, ಅಗ್ನಿಪಥ ಯೋಜನೆಯು ಸೇನೆಗೆ ಸೇರಬೇಕೆಂಬ ಭರವಸೆಯನ್ನು ಹುಸಿಮಾಡುತ್ತದೆ ಎಂದು ನಂಬಿ ಪ್ರತಿಭಟಿಸಲು ತೆಲಂಗಾಣದ ವಿವಿಧ ಭಾಗಗಳಿಂದ ಸಿಕಂದರಾಬಾದ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ.
ಇದನ್ನೂ ಓದಿ:ಸಿಕಂದ್ರಾಬಾದ್ನಲ್ಲಿ ರೈಲಿಗೆ ಬೆಂಕಿ, ಗಾಳಿಯಲ್ಲಿ ಗುಂಡು... ಯುವಕ ಸಾವು