ಕರ್ನಾಟಕ

karnataka

By

Published : Apr 19, 2022, 2:58 PM IST

ETV Bharat / bharat

ಆನ್​ಲೈನ್ ಆ್ಯಪ್ ಮೂಲಕ ₹12 ಸಾವಿರ ಸಾಲ ನೀಡಿ ಕಿರುಕುಳ; ಯುವಕ ಆತ್ಮಹತ್ಯೆ

ಆನ್​ಲೈನ್ ಆ್ಯಪ್ ಮೂಲಕ ಸಾವಿರಾರು ರೂಪಾಯಿ ಸಾಲ ಪಡೆದು ತದನಂತರ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಇದೀಗ 12 ಸಾವಿರ ರೂಪಾಯಿ ಪಡೆದುಕೊಂಡಿದ್ದ ವ್ಯಕ್ತಿಯೋರ್ವ ವ್ಯವಸ್ಥಾಪಕರ ಕಿರುಕುಳದಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ.

Young Man committed Suicide
Young Man committed Suicide

ಹೈದರಾಬಾದ್​(ತೆಲಂಗಾಣ):ಆನ್​ಲೈನ್​ ಅಪ್ಲಿಕೇಶನ್ ಮೂಲಕ ರಾಜ್​ಕುಮಾರ್ ಎಂಬಾತ ಕೇವಲ 12 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ತಿಂಗಳ ಬಳಿಕ ಇಎಂಐ ಮೂಲಕ 4 ಸಾವಿರ ರೂ. ಮರುಪಾವತಿ ಮಾಡಿದ್ದಾನೆ. ಇದಾದ ಬಳಿಕ ತನ್ನ ಸ್ನೇಹಿತರ ಮೊಬೈಲ್ ನಂಬರ್‌ಗಳನ್ನು ಆತ ಸಾಲ ನೀಡುವ ಆನ್​ಲೈನ್​​ ಆ್ಯಪ್​ನಲ್ಲಿ ನೀಡಿದ್ದಾನೆ.

ಸಾಲ ಪಡೆದು ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಆನ್​ಲೈನ್ ಮೂಲಕ ಸಾಲ ನೀಡಿರುವ ಕಂಪನಿಯು ಆತನ ಸ್ನೇಹಿತರಿಗೆ 'ರಾಜ್​ಕುಮಾರ್ ಇಲ್ಲಿಯವರೆಗೆ ಸಾಲ ಮರುಪಾವತಿ ಮಾಡಿಲ್ಲ' ಎಂದು ಮೇಲಿಂದ ಮೇಲೆ ಸಂದೇಶ ರವಾನಿಸಿದೆ. ಇದರಿಂದ ಅವಮಾನಕ್ಕೊಳಗಾಗಿರುವ ರಾಜ್​ಕುಮಾರ್​​ ನಿನ್ನೆ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರಾಜ್​ಕುಮಾರ್​ ಜಿಯಾಗುಡಾ ಪ್ರದೇಶದಲ್ಲಿ ವಾಸವಾಗಿದ್ದು, ಆನ್​ಲೈನ್ ಮೂಲಕ ಸಾಲ ಪಡೆದುಕೊಂಡಿದ್ದನು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಆರ್ಥಿಕ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮೋದಿ ವಿಫಲ: ಸುಬ್ರಮಣಿಯನ್ ಸ್ವಾಮಿ

ಘಟನೆ ಬೆನ್ನಲ್ಲೇ ಮೃತನ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ಕಿರುಕುಳದಿಂದಾಗಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದನು.

ABOUT THE AUTHOR

...view details