ಕರ್ನಾಟಕ

karnataka

841 ಸರ್ಕಾರಿ ವಕೀಲರ ವಜಾಗೊಳಿಸಿದ ಯೋಗಿ ಸರ್ಕಾರ: ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಕೂಡ ಡಿಸ್ಮಿಸ್​​

By

Published : Aug 2, 2022, 4:56 PM IST

ಕಾನೂನು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

Yogi govt dismisses 841 govt lawyers
841 ಜನ ಸರ್ಕಾರಿ ವಕೀಲರ ವಜಾಗೊಳಿಸಿದ ಯೋಗ ಸರ್ಕಾರ: ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಕೂಡ ಡಿಸ್ಮಿಸ್​​

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ 841 ಜನ ಸರ್ಕಾರಿ ವಕೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿ ಆದೇಶಿಸಿದೆ. ಆದರೆ, ಸರ್ಕಾರದ ಆದೇಶದಲ್ಲಿ ಇಷ್ಟೊಂದು ಸಂಖ್ಯೆಯ ವಕೀಲರ ವಜಾಕ್ಕೆ ಕಾರಣ ಕೊಟ್ಟಿಲ್ಲ. ಕಾನೂನು ಮತ್ತು ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಕುಂಜ್​ ಈ ಆದೇಶ ಹೊರಡಿಸಿದ್ದಾರೆ.

ಅಲಹಾಬಾದ್​ ಹೈಕೋರ್ಟ್​ನಲ್ಲಿ ನೇಮಕವಾದ ಎಲ್ಲ ಸಾರ್ವಜನಿಕ ಅಭಿಯೋಜಕರನ್ನೂ ವಜಾ ಮಾಡಲಾಗಿದೆ. ಹೈಕೋರ್ಟ್​ನ ಮುಖ್ಯ ಪೀಠದ 505 ಜನ ರಾಜ್ಯ ನ್ಯಾಯಾಂಗ ಅಧಿಕಾರಿಗಳು ಮತ್ತು ಲಖನೌ ಹೈಕೋರ್ಟ್​ ಪೀಠದ 336 ಜನ ಸರ್ಕಾರಿ ವಕೀಲರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಇದರ ಭಾಗವಾಗಿಯೇ ಹೆಚ್ಚುವರಿ ಅಡ್ವೋಕೇಟ್​ ಜನರಲ್​ ವಿನೋದ್​ ಕಾಂತ್​ ಅವರನ್ನೂ ಕೆಲಸದಿಂದ ತೆಗೆದು ಹಾಕಿದ್ದಾರೆೆ. ಇದರ ಜೊತೆಗೆ ಪ್ರಯಾಗ್‌ರಾಜ್ ನ್ಯಾಯಪೀಠದಿಂದ 26 ಹೆಚ್ಚುವರಿ ಮುಖ್ಯ ಕಾಯಂ ವಕೀಲರನ್ನೂ ವಜಾಗೊಳಿಸಿದ್ದಾರೆ. ಅಷ್ಟೇ ಅಲ್ಲ, 179 ಜನ ಕಾಯಂ ವಕೀಲರಿಗೆ ಕಡ್ಡಾಯ ರಜೆ ನೀಡಲಾಗಿದೆ.

ಇಷ್ಟು ಸಾಲದೆಂಬಂತೆ, 111 ಸಿವಿಲ್ ಬ್ರೀಫ್ ಹೋಲ್ಡರ್‌ಗಳು ಮತ್ತು 141 ಕ್ರಿಮಿನಲ್ ಬ್ರೀಫ್ ಹೋಲ್ಡರ್‌ಗಳು, 47 ಹೆಚ್ಚುವರಿ ಸರ್ಕಾರಿ ವಕೀಲರನ್ನೂ ವಜಾಗೊಳಿಸಲಾಗಿದೆ. ಇತ್ತ, ಲಖನೌ ಪೀಠದ ಎರಡು ಮುಖ್ಯ ಸ್ಥಾಯಿ ಮಂಡಳಿಗಳ ಸೇವೆಗಳನ್ನೂ ಕೂಡ ವಜಾ ಮಾಡಲಾಗಿದ್ದು, 33 ಹೆಚ್ಚುವರಿ ಸರ್ಕಾರಿ ವಕೀಲರು, 66 ಕ್ರಿಮಿನಲ್ ಮತ್ತು 176 ಸಿವಿಲ್ ಬ್ರೀಫ್ ಹೋಲ್ಡರ್‌ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ.

ಇದಲ್ಲದೇ, 59 ಹೆಚ್ಚುವರಿ ಮುಖ್ಯ ಸ್ಥಾಯಿ ಮಂಡಳಿ ಮತ್ತು ಸ್ಥಾಯಿ ಪರಿಷತ್ ಸದಸ್ಯರನ್ನೂ ವಜಾ ಮಾಡಲಾಗಿದೆ. ಯಾವ ವಕೀಲರ ವಜಾಕ್ಕೂ ಸರ್ಕಾರದಲ್ಲಿ ಆದೇಶ ಪ್ರತಿಯಲ್ಲಿ ನಿಖರವಾದ ಕಾರಣ ಕೊಟ್ಟಿಲ್ಲ. ಆದರೆ, ಮೂಲಗಳ ಪ್ರಕಾರ, ಈ ಕಾನೂನು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಸರ್ಕಾರು ಕಠಿಣ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ:ಪಾಸ್​ಪೋರ್ಟ್​​ ನವೀಕರಣಕ್ಕೆ ಅನುಮತಿ: ಶೀಘ್ರವೇ ಕಿಡ್ನಿ ಕಸಿಗಾಗಿ ಲಾಲು ಸಿಂಗಾಪುರಕ್ಕೆ

ABOUT THE AUTHOR

...view details