ಕರ್ನಾಟಕ

karnataka

By

Published : Dec 6, 2020, 8:20 PM IST

ETV Bharat / bharat

ಹಿಮಪಾತದ ಸೂಚನೆ: ಜಮ್ಮು ಕಾಶ್ಮೀರದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಹಿಮಪಾತವಾಗುವ ಸೂಚನೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಹಲವೆಡೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಯೆಲ್ಲೋ ಅಲರ್ಟ್​ (ಯೆಲ್ಲೋ ಅಲರ್ಟ್​) ಘೋಷಿಸಿ ಎಚ್ಚರಿಕೆ ನೀಡಿದೆ.

Yellow alert in Jammu and Kashmir
ಜಮ್ಮು ಕಾಶ್ಮೀರದಲ್ಲಿ ಹಿಮಪಾತದ ಸೂಚನೆ

ಶ್ರೀನಗರ (ಜಮ್ಮು ಕಾಶ್ಮೀರ): ಕಣಿವೆ ನಾಡಿನ ಹಲವೆಡೆ ಹಿಮಪಾತದ ಸೂಚನೆ ಸಿಕ್ಕಿದ್ದು, ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಿ ಎಚ್ಚರಿಕೆ ನೀಡಿದೆ.

ರಜೌರಿ, ರಾಮ್​ಬನ್, ಕಿಶ್ತ್ವಾರ್, ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ ಮತ್ತು ಗಂದೇರ್​​ಬಲ್ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಹಿಮ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಓದಿ:ಹೆಚ್ಚುತ್ತಿರುವ ಜಾಗತಿಕ ಉಷ್ಣಾಂಶ: ಸಾವುಗಳಿಗೆ ಹವಾಮಾನ ಬದಲಾವಣೆ ಕಾರಣವೇ?

ಡಿಸೆಂಬರ್ 7ರಿಂದ 9ರವರೆಗೆ ಲಡಾಖ್​, ಗಿಲ್ಗಿಟ್-ಬಾಲ್ಟಿಸ್ತಾನ, ಮುಝಾಫ್ಪರ್​ಬಾದ್ ಮುಂತಾದ ಸ್ಥಳಗಳಲ್ಲಿ ಪಶ್ಚಿಮ ಭಾಗದಲ್ಲಿ ವಾತಾವರಣದ ಏರುಪೇರಿನಿಂದಾಗಿ ಭಾರಿ ಮಳೆ ಅಥವಾ ಹಿಮ ಸುರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಟ್ವೀಟ್ ಮಾಡಿದೆ.

ನವೆಂಬರ್ 9ರಂದು ಝೋಜಿಲಾ ಕಣಿವೆಯಲ್ಲಿ ಹಿಮಪಾತವಾಗಿ ಐದು ಮಂದಿ ಸಿಲುಕಿದ್ದು, ಗಡಿ ರಸ್ತೆಗಳ ಸಂಘಟನೆ (ಬಾರ್ಡರ್​ ರೋಡ್ ಆರ್ಗನೈಸೇನ್ ) ಅವರನ್ನ ರಕ್ಷಿಸಿತ್ತು. ಈಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸೈನಿಕರು ಹಾಗೂ ಅಲ್ಲಿನ ನಾಗರಿಕರಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ.

ABOUT THE AUTHOR

...view details