ಚೆನ್ನೈ (ತಮಿಳುನಾಡು):ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ಇಂದು ಚೆನ್ನೈಗೆ ಆಗಮಿಸಿದ್ದು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲ ಯಾಚನೆ ಮಾಡಿದ್ದಾರೆ.
ತಮಿಳುನಾಡು ಸಿಎಂ ಭೇಟಿಯಾಗಿ ಬೆಂಬಲ ಕೋರಿದ ಯಶವಂತ್ ಸಿನ್ಹಾ - ರಾಷ್ಟ್ರಪತಿ ಚುನಾವಣೆ ಪ್ರತಿಪಕ್ಷಗಳ ಅಭ್ಯರ್ಥಿ
ಕೇರಳದ ತಿರುವನಂತಪುರದಿಂದ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿನ್ಹಾರನ್ನು ಡಿಎಂಕೆ ಎಂಪಿ ಕನಿಮೋಳಿ ಕರುಣಾನಿಧಿ ಮತ್ತು ತಮಿಳುನಾಡು ಸಚಿವರಾದ ಎಂ.ಎ.ಸುಬ್ರಮಣಿಯನ್ ಮತ್ತು ಪಿ.ಕೆ.ಶೇಕರ ಬಾಬು ಬರಮಾಡಿಕೊಂಡರು.
![ತಮಿಳುನಾಡು ಸಿಎಂ ಭೇಟಿಯಾಗಿ ಬೆಂಬಲ ಕೋರಿದ ಯಶವಂತ್ ಸಿನ್ಹಾ Yashwant Sinha meets Tamil Nadu CM MK Stalin](https://etvbharatimages.akamaized.net/etvbharat/prod-images/768-512-15700528-477-15700528-1656597488958.jpg)
Yashwant Sinha meets Tamil Nadu CM MK Stalin
ರಾಷ್ಟ್ರಪತಿ ಚುನಾವಣೆಯ ಮತದಾನವು ಜುಲೈ 18 ರಂದು ನಡೆಯಲಿದೆ. 21ರಂದು ಮತ ಎಣಿಕೆ ಜರುಗಲಿದೆ. ಕಳೆದ ಸೋಮವಾರ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದರು.