ಕರ್ನಾಟಕ

karnataka

ETV Bharat / bharat

ತವಾಂಗ್ ಸಂಘರ್ಷ; ಭಾರತ - ಚೀನಾ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಅಡ್ಡಿ - etv bharat kannada

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್​ನಲ್ಲಿ ಡಿಸೆಂಬರ್ 9 ರಂದು ನಡೆದ ಸಂಘರ್ಷದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಗೃಹಸಚಿವ ರಾಜನಾಥ್ ಸಿಂಗ್, ನಮ್ಮ ಭೂಪ್ರದೇಶವನ್ನು ಪಿಎಲ್​ಎ ಸೈನಿಕರು ಅತಿಕ್ರಮಿಸದಂತೆ ಭಾರತೀಯ ಸೇನೆಯು ಧೈರ್ಯದಿಂದ ತಡೆಯಿತು ಮತ್ತು ಅವರು ಹಿಂದೆ ಸರಿಯುವಂತೆ ಮಾಡಿತು. ಈ ಸಂಘರ್ಷದಲ್ಲಿ ಎರಡೂ ಕಡೆಯ ಕೆಲ ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.

ತವಾಂಗ್ ಸಂಘರ್ಷ; ಭಾರತ - ಚೀನಾ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಅಡ್ಡಿ
xi-jinpings-india-dilemma-to-the-fore-as-he-begins-a-new-term-in-power

By

Published : Dec 22, 2022, 5:09 PM IST

ಬೀಜಿಂಗ್:ಕ್ಸಿ ಜಿನ್​ಪಿಂಗ್ ಮತ್ತೊಂದು ಬಾರಿ ಐದು ವರ್ಷದ ಅವಧಿಗೆ ಚೀನಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಇದೇ ತಿಂಗಳು ಅರುಣಾಚಲ ಪ್ರದೇಶದ ಯಾಂಗ್​ ಟ್ಸಿ ಗಡಿಯಲ್ಲಿ ಭಾರತೀಯ ಹಾಗೂ ಚೀನಾ ಯೋಧರ ಮಧ್ಯೆ ನಡೆದ ಸಂಘರ್ಷದ ಕಾರಣದಿಂದ ಎರಡೂ ದೇಶಗಳ ಮಧ್ಯೆ ಯಾವುದೇ ದ್ವಿಪಕ್ಷೀಯ ಬಲವರ್ಧನೆಯಾಗದೆ ಈ ವರ್ಷವೂ ಖಾಲಿಯಾಗಿ ಕಳೆದು ಹೋಗಲಿದೆ. 2020ರಲ್ಲಿ ಲಡಾಖ್​ನಲ್ಲಿ ಚೀನಾದ ಪೀಪಲ್ಸ್​ ಲಿಬರೇಶನ್ ಆರ್ಮಿ ಭಾರತದೊಳಕ್ಕೆ ನುಗ್ಗಲು ಯತ್ನಿಸಿದ ನಂತರ ದೇಶಗಳ ಮಧ್ಯದ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ.

ಗಡಿಯುದ್ದಕ್ಕೂ ಹಲವಾರು ಪ್ರದೇಶಗಳಲ್ಲಿ ಸೈನ್ಯವನ್ನು ತೆರವು ಮಾಡುವ ಬಗ್ಗೆ ಎರಡೂ ದೇಶಗಳು ಸುಮಾರು 16 ಸುತ್ತಿನ ಮಾತುಕತೆಯ ನಂತರ ಒಂದಿಷ್ಟು ಪ್ರಗತಿ ಸಾಧಿಸಿದ್ದವು. ಆದರೆ ಯಾಂಗ್​ ಟ್ಸಿ ಸಂಘರ್ಷದ ನಂತರ ಈ ಒಪ್ಪಂದಗಳ ಮೇಲೆ ಕರಿನೆರಳು ಬೀಳುವ ಸಾಧ್ಯತೆ ದಟ್ಟವಾಗಿದೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್​ನಲ್ಲಿ ಡಿಸೆಂಬರ್ 9 ರಂದು ನಡೆದ ಸಂಘರ್ಷದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಗೃಹಸಚಿವ ರಾಜನಾಥ್ ಸಿಂಗ್, ನಮ್ಮ ಭೂಪ್ರದೇಶವನ್ನು ಪಿಎಲ್​ಎ ಸೈನಿಕರು ಅತಿಕ್ರಮಿಸದಂತೆ ಭಾರತೀಯ ಸೇನೆಯು ಧೈರ್ಯದಿಂದ ತಡೆಯಿತು ಮತ್ತು ಅವರು ಹಿಂದೆ ಸರಿಯುವಂತೆ ಮಾಡಿತು. ಈ ಸಂಘರ್ಷದಲ್ಲಿ ಎರಡೂ ಕಡೆಯ ಕೆಲ ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.

ಈ ಬಗ್ಗೆ ಹೇಳಿಕೆ ನೀಡಿದ ಚೀನಾದ ವಿದೇಶಾಂಗ ಸಚಿವಾಲಯ, ಭಾರತದ ಗಡಿಯುದ್ದಕ್ಕೂ ಸ್ಥಿತಿ ಬಹುತೇಕ ಸಹಜವಾಗಿದೆ ಎಂದು ಹೇಳಿತ್ತು. ತನ್ನ ಯೋಧರು ಚೀನಾ ಗಡಿಯೊಳಗೆ ನಿಯಮಿತ ಗಸ್ತು ತಿರುಗುತ್ತಿರುವಾಗ ಭಾರತೀಯ ಯೋಧರು ಅವರನ್ನು ತಡೆದ ಕಾರಣಕ್ಕೆ ಘರ್ಷಣೆ ಏರ್ಪಟ್ಟಿತು ಎಂದು ಪಿಎಲ್​ಎ ವೆಸ್ಟರ್ನ್ ಥಿಯೇಟರ್ ಕಮಾಂಡ್​ನ ಸೀನಿಯರ್ ಕರ್ನಲ್ ಲಾಂಗ್ ಶೋಹುವಾ ಹೇಳಿದ್ದಾರೆ.

ನಮ್ಮ ಪಡೆಗಳ ಪ್ರತಿಕ್ರಿಯೆಯು ವೃತ್ತಿಪರ, ದೃಢ ಮತ್ತು ಪ್ರಮಾಣಿತವಾಗಿದೆ. ಇದು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ. ಅಂದಿನಿಂದ ಎರಡೂ ಕಡೆಯವರು ನಿರ್ಲಿಪ್ತರಾಗಿದ್ದಾರೆ ಎಂದು ಲಾಂಗ್ ಹೇಳಿದರು. 3,488 ಕಿಮೀ ಉದ್ದದ ಗಡಿರೇಖೆಯಿಲ್ಲದ ಎಲ್​ಎಸಿ ಉದ್ದಕ್ಕೂ ಪ್ರಮುಖ ಸ್ಥಾನಗಳನ್ನು ವಶಕ್ಕೆ ಪಡೆಯಲು ನೂರಾರು ಸೈನಿಕರನ್ನು ಗಸ್ತು ಕಳುಹಿಸಲು ಚೀನಾದ ಮಿಲಿಟರಿ ತನ್ನ ಲಡಾಖ್ ಮಾದರಿಯ ತಂತ್ರಗಳನ್ನು ಮುಂದುವರಿಸಬಹುದು ಎಂಬುದನ್ನು ಪಿಎಲ್​ಎ ಹೇಳಿಕೆ ತೋರಿಸುತ್ತದೆ ಎಂದು ವೀಕ್ಷಕರು ಹೇಳುತ್ತಾರೆ.

2020 ರಿಂದ 16 ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳ ನಂತರ ಉಭಯ ಕಡೆಯವರು ವಿವಿಧ ಸಂಘರ್ಷ ಪ್ರದೇಶಗಳಿಂದ ಪಡೆಗಳನ್ನು ಹಿಂತೆಗೆದುಕೊಂಡಿದ್ದರು. ಇದರಲ್ಲಿ ಕೊನೆಯದಾಗಿ ಪೂರ್ವ ಲಡಾಖ್‌ನ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಗಸ್ತು ಕೇಂದ್ರ 15 ರಿಂದ ಪಡೆಗಳು ಹಿಂದೆ ಸರಿದಿದ್ದವು. ಯಾಂಗ್​ ಟ್ಸಿ ಘರ್ಷಣೆಯು ರಾಜಕೀಯವಾಗಿ ಮಹತ್ವದ್ದಾಗಿದೆ, ಏಕೆಂದರೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಐದು ವರ್ಷಗಳಿಗೊಮ್ಮೆ ನಡೆಯುವ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಕ್ಸಿ ಅವರು ಅಭೂತಪೂರ್ವ ಮೂರನೇ ಬಾರಿಗೆ ಐದು ವರ್ಷಗಳ ಅವಧಿಗೆ ಮರು ಆಯ್ಕೆಯಾದ ನಂತರ ಗಡಿಯಲ್ಲಿ ನಡೆದ ಮೊದಲ ಪ್ರಮುಖ ಘಟನೆಯಾಗಿದೆ.

ಪಿಎಲ್​ಎ ಯ ಒಟ್ಟಾರೆ ಹೈಕಮಾಂಡ್, ಚೀನಾದ ಸರ್ವಶಕ್ತ ಕೇಂದ್ರೀಯ ಮಿಲಿಟರಿ ಆಯೋಗದ (CMC) ಅಧ್ಯಕ್ಷರಾಗಿ 69 ವರ್ಷದ ಕ್ಸಿ ಅವರನ್ನು ಕಾಂಗ್ರೆಸ್ ಮರು ನೇಮಕಗೊಳಿಸಿದೆ. ಕ್ಸಿ ಅವರ ಮೂರನೇ ಅವಧಿಯ ಅಡಿಯಲ್ಲಿ ಚೀನಾ ಹೊಸ ಅಧಿಕಾರಿಗಳನ್ನು ಹೊಂದಲಿದೆ. ಹೊಸ ವಿದೇಶಾಂಗ ಸಚಿವರಾಗಿ ವಾಂಗ್ ಯಿ ಅವರನ್ನು ನೇಮಿಸಲಾಗಿದೆ. ವಾಂಗ್ ಯಿ ಅವರನ್ನು CPC ಯ ಉನ್ನತ ಮಟ್ಟದ ರಾಜಕೀಯ ಅಧಿಕಾರ ಸ್ಥಾನಕ್ಕೆ ನೇಮಿಸಿದ್ದು, ಇವರು ಈಗ ಚೀನಾದ ಪ್ರಬಲ ರಾಜತಾಂತ್ರಿಕರಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಚೀನಾ ಗಡಿ ಸಮೀಪ ಭಾರತ-ಯುಎಸ್​ ಸೇನೆಯಿಂದ ಸಮರಾಭ್ಯಾಸ: ವಿಡಿಯೋ

ABOUT THE AUTHOR

...view details