ಕರ್ನಾಟಕ

karnataka

ETV Bharat / bharat

'ನಾವು ಜಿ ಹುಜೂರ್​​ 23 ಅಲ್ಲ..' ಸಿಬಲ್​ ಹೇಳಿಕೆಗೆ ತೀವ್ರ ಆಕ್ಷೇಪ: ಕಾಂಗ್ರೆಸ್‌ ಕಾರ್ಯಕರ್ತರಿಂದ ಕಾರು ಜಖಂ - ಕಪಿಲ್ ಶರ್ಮಾ ನಿವಾಸದ ಎದುರು ಪ್ರತಿಭಟನೆ

ಪಂಜಾಬ್​ ಕಾಂಗ್ರೆಸ್‌ನಲ್ಲಿನ ಒಳಜಗಳ ಸೇರಿದಂತೆ ಅನೇಕ ವಿಷಯಗಳ ಕುರಿತು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್​ ಮಾತನಾಡಿದ್ದು, ಇದೀಗ ಅವರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ.

leader Kapil Sibal
leader Kapil Sibal

By

Published : Sep 29, 2021, 9:01 PM IST

ನವದೆಹಲಿ:ಪಂಜಾಬ್​ ಕಾಂಗ್ರೆಸ್​ನಲ್ಲಿರುವ ಒಳಜಗಳ ಸೇರಿದಂತೆ ಅನೇಕ ವಿಚಾರಗಳ ಕುರಿತು ಬಹಿರಂಗವಾಗಿ ಮಾತನಾಡಿರುವ ಕಪಿಲ್​ ಸಿಬಲ್​ ವಿರುದ್ಧ ಇದೀಗ ಟೀಕೆ ವ್ಯಕ್ತವಾಗ್ತಿದೆ. ಪಕ್ಷದ ಅನೇಕ ಕಾರ್ಯಕರ್ತರು ಅವರ ನಿವಾಸದೆದುರು ಪ್ರತಿಭಟನೆ ನಡೆಸಿದ್ದಾರೆ.

ನವದೆಹಲಿಯಲ್ಲಿರುವ ಸಿಬಲ್​ ನಿವಾಸದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, 'Get Well Soon Kapil Sibal'(ಬೇಗ ಚೇತರಿಸಿಕೊಳ್ಳಿ ಕಪಿಲ್ ಸಿಬಲ್) ಎಂಬ ಘೋಷಣೆ ಕೂಗಿದರು. ಇದೇ ವೇಳೆ ಅವರ ಕಾರಿನ ಗ್ಲಾಸ್​ ಜಖಂಗೊಳಿಸಿದ್ದು, ಕಾಂಗ್ರೆಸ್ ಪಕ್ಷ ತೊರೆಯುವಂತೆ ಆಗ್ರಹಿಸಿದ್ದಾರೆ.

ಕಪಿಲ್​ ಸಿಬಲ್​ ಹೇಳಿಕೆಗೆ ಕಾಂಗ್ರೆಸ್​ನ ಹಿರಿಯ ಮುಖಂಡ ಟಿ.ಎಸ್.ಸಿಂಗ್​ ಡಿಯೋ, ಕಪಿಲ್ ಸಿಬಲ್ ದಾರಿ ತಪ್ಪಿಸುತ್ತಿದ್ದಾರೆ. ಪಕ್ಷದಲ್ಲಿ ಸೋನಿಯಾ ಗಾಂಧಿ ಅವರೇ ಎಲ್ಲ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಪಿಲ್ ಸಿಬಲ್​ರಂತಹ ಹಿರಿಯ ಅನುಭವಿ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಿರುವುದು ದುರಾದೃಷ್ಟಕರ. ಕಾಂಗ್ರೆಸ್​​ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂದಿಗೂ ಪಕ್ಷ ತೊರೆಯುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಪಕ್ಷಕ್ಕೆ ಅಧ್ಯಕ್ಷರೇ ಇಲ್ಲ, ನಿರ್ಧಾರ ಯಾರು ತೆಗೆದುಕೊಳ್ತಿದ್ದಾರೆಂದು ಗೊತ್ತಿಲ್ಲ: ಕಪಿಲ್ ಸಿಬಲ್​

ಪಂಜಾಬ್ ರಾಜಕೀಯ ವಿಚಾರವಾಗಿ ಮಾತನಾಡಿದ್ದ ಕಪಿಲ್ ಸಿಬಲ್​, ನಾವು ಜಿ-23 ಸದಸ್ಯರು. ಜಿ ಹುಜೂರ್​-23 ಎನ್ನುವವರಲ್ಲ(ಪ್ರಶ್ನಾತೀತ ವಿಧೇಯತೆ). ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ಈ ಹಿಂದಿನಿಂದಲೂ ನಾವು ಪ್ರಸ್ತಾಪ ಮಾಡುತ್ತಲೇ ಇದ್ದೇವೆ. ಪಕ್ಷದಲ್ಲಿ ಮಹತ್ವದ ಬದಲಾವಣೆ ಬರಬೇಕು ಎಂದು ಅವರು ಒತ್ತಾಯಿಸಿದ್ದರು.

ABOUT THE AUTHOR

...view details