ಕರ್ನಾಟಕ

karnataka

ETV Bharat / bharat

ಸಂವಿಧಾನದ ಪ್ರತಿಯಲ್ಲಿ 'ಸೋಶಿಯಲಿಸ್ಟ್​ ಸೆಕ್ಯೂಲರ್' ಪದಗಳು ಕಾಣೆ; ಅಧೀರ್ ರಂಜನ್ ಚೌಧರಿ - ಹೊಸ ಸಂಸತ್ ಕಟ್ಟಡದ ಉದ್ಘಾಟನಾ ದಿನದಂದು

ಸಂವಿಧಾನದ ಹೊಸ ಪ್ರತಿಗಳಲ್ಲಿ ಸೋಶಿಯಲಿಸ್ಟ್ ಮತ್ತು ಸೆಕ್ಯೂಲರ್ ಪದಗಳು ಕಾಣೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

'Socialist, Secular' removed from new copies of Constitution,
'Socialist, Secular' removed from new copies of Constitution,

By ANI

Published : Sep 20, 2023, 4:06 PM IST

ನವದೆಹಲಿ: ಹೊಸ ಸಂಸತ್ ಕಟ್ಟಡದ ಉದ್ಘಾಟನಾ ದಿನದಂದು ಸಂಸದರಿಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳಲ್ಲಿ 'ಸಮಾಜವಾದಿ ಜಾತ್ಯತೀತ' ಎಂಬ ಪದಗಳು ಕಾಣೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

"ನಮಗೆ ಇಂದು ನೀಡಲಾದ ಹೊಸ ಸಂವಿಧಾನದ ಪ್ರತಿಗಳ ಪೀಠಿಕೆಯಲ್ಲಿ 'ಸಮಾಜವಾದಿ ಜಾತ್ಯತೀತ' ಎಂಬ ಪದಗಳಿಲ್ಲ. ಇದೇ ಸಂವಿಧಾನದ ಪ್ರತಿಗಳನ್ನು ಕೈಯಲ್ಲಿ ಹಿಡಿದು ನಾವು ಹೊಸ ಸಂಸತ್ ಭವನದ ಕಟ್ಟಡ ಪ್ರವೇಶಿಸಿದ್ದೆವು" ಎಂದು ಅವರು ಮಂಗಳವಾರ ಎಎನ್ಐಗೆ ತಿಳಿಸಿದರು. "1976 ರಲ್ಲಿ ತಿದ್ದುಪಡಿಯ ನಂತರ ಈ ಪದಗಳನ್ನು ಸೇರಿಸಲಾಗಿತ್ತು ಎಂಬುದು ನಮಗೆಲ್ಲ ಗೊತ್ತಿದೆ. ಆದರೆ ಇಂದು ನೀಡಲಾದ ಸಂವಿಧಾನದ ಪ್ರತಿಗಳಲ್ಲಿ ಆ ಪದಗಳು ಇಲ್ಲದಿರುವುದು ಕಳವಳಕಾರಿ ವಿಷಯವಾಗಿದೆ" ಎಂದು ಅವರು ಹೇಳಿದರು. "ಅವರ ಉದ್ದೇಶ ಅನುಮಾನಾಸ್ಪದವಾಗಿದೆ. ಅತ್ಯಂತ ಬುದ್ಧಿವಂತಿಕೆಯಿಂದ ಈ ಕೆಲಸ ಮಾಡಲಾಗಿದ್ದು, ಇದು ನನಗೆ ಕಾಳಜಿಯ ವಿಷಯವಾಗಿದೆ." ಎಂದು ಅವರು ತಿಳಿಸಿದರು.

"ನಾನು ಈ ವಿಷಯವನ್ನು ಆಗಲೇ ಎತ್ತಲು ಪ್ರಯತ್ನಿಸಿದ್ದೆ, ಆದರೆ ನನಗೆ ಅವಕಾಶ ಸಿಗಲಿಲ್ಲ" ಎಂದು ಚೌಧರಿ ನುಡಿದರು. ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಭಾರತದ ಸಂವಿಧಾನದ ಪ್ರಕಾರ 'ಇಂಡಿಯಾ' ಮತ್ತು 'ಭಾರತ' ನಡುವೆ ಯಾವುದೇ ವ್ಯತ್ಯಾಸವಿಲ್ಲದ ಕಾರಣ ಯಾರೂ 'ಇಂಡಿಯಾ' ಮತ್ತು 'ಭಾರತ' ನಡುವೆ ಅನಗತ್ಯ ಬಿರುಕು ಸೃಷ್ಟಿಸಲು ಪ್ರಯತ್ನಿಸಬಾರದು ಎಂದು ಹೇಳಿದರು.

"ಈ ಸಂವಿಧಾನವು ನಮಗೆ ಗೀತೆ, ಕುರಾನ್ ಮತ್ತು ಬೈಬಲ್ ಗಿಂತ ಕಡಿಮೆಯಿಲ್ಲ. ಇಂಡಿಯಾ ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ ...ಎಂದು ಸಂವಿಧಾನದ ಅನುಚ್ಛೇದ 1 ಹೇಳುತ್ತದೆ. ಇದರರ್ಥ ಇಂಡಿಯಾ ಮತ್ತು ಭಾರತದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡರ ನಡುವೆ ಅನಗತ್ಯವಾಗಿ ಬಿರುಕು ಮೂಡಿಸಲು ಯಾರೂ ಪ್ರಯತ್ನಿಸಬಾರದು" ಎಂದು ಅವರು ಹೇಳಿದರು. ಜಿ 20 ಔತಣಕೂಟದ ಆಹ್ವಾನದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬುದರ ಬದಲಾಗಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿದ ನಂತರ ಈ ವಿವಾದ ಸೃಷ್ಟಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಭಯ ಸದನಗಳ ಸಂಸದರನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಭಾರತೀಯ ಸಂಸತ್ತು ಹೊಸ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು. ಐದು ದಿನಗಳ ವಿಶೇಷ ಸಂಸತ್ ಅಧಿವೇಶನದ ನಡುವೆ ಸಂಸದರು ಮಧ್ಯಾಹ್ನ ಹೊಸದಾಗಿ ಉದ್ಘಾಟಿಸಲಾದ ಕಟ್ಟಡದಲ್ಲಿ ಸಭೆ ಸೇರಿದರು. ಲೋಕಸಭೆ ಮತ್ತು ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮಹಿಳಾ ಮೀಸಲಾತಿ ಮಸೂದೆ - ನಾರಿಶಕ್ತಿ ವಂದನ್ ಅಧಿನಿಯಮ್ ಅನ್ನು ಸರ್ವಾನುಮತದಿಂದ ಅನುಮೋದಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ :ಮಹಿಳಾ ಮೀಸಲಾತಿ ಮಸೂದೆ ತಕ್ಷಣ ಕಾನೂನಾಗಲಿ; ಸೋನಿಯಾ ಗಾಂಧಿ ಒತ್ತಾಯ

ABOUT THE AUTHOR

...view details