ಕರ್ನಾಟಕ

karnataka

By

Published : May 1, 2023, 7:24 PM IST

ETV Bharat / bharat

ಕೌಟುಂಬಿಕ ಕಲಹ: ತನ್ನ 6 ತಿಂಗಳ ಮಗುವನ್ನೇ ಗಂಗಾನದಿಯಲ್ಲಿ ಎಸೆದ ಮಹಿಳೆ..!

ತನ್ನ ಆರು ತಿಂಗಳ ಮಗುವನ್ನು ಗಂಗಾನದಿಯಲ್ಲಿ ಎಸೆದ ಮಹಿಳೆ - ಆರೋಪಿ ಮಹಿಳೆಯನ್ನು ಬಂಧಿಸಿದ ರಘುನಾಥಗಂಜ್ ಠಾಣೆ ಪೊಲೀಸರು.

Woman throws her 6 month old son into Ganges
ಮಗುವನ್ನು ಗಂಗಾನದಿಯಲ್ಲಿ ಎಸೆದ ಮಹಿಳೆ

ರಘುನಾಥಗಂಜ್(ಪಶ್ಚಿಮ ಬಂಗಾಳ):ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಆರು ತಿಂಗಳ ಮಗುವನ್ನು ಸೇತುವೆ ಮೇಲಿನಿಂದ ಗಂಗಾನದಿಯಲ್ಲಿ ಎಸೆದರುವ ಅಮಾನವೀಯ ಘಟನೆ ಸೋಮವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಯತ್ನದಿಂದ ಮಗುವನ್ನು ರಕ್ಷಿಸಲಾಯಿತು. ಸದ್ಯ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿ ಮಹಿಳೆಯ ಬಂಧನ:ಮುರ್ಷಿದಾಬಾದ್‌ನ ರಘುನಾಥಗಂಜ್ ಪೊಲೀಸ್ ಠಾಣೆಯ ಜಂಗಿಪುರ ಭಾಗೀರಥಿ ಸೇತುವೆಯಲ್ಲಿ ಸೋಮವಾರ ಬೆಳಗ್ಗೆ ಮನಕಲಕುವಂತಹ ದುರ್ಘಟನೆ ಜರುಗಿದೆ. ಆರೋಪಿ ಮಹಿಳೆಯನ್ನು ರಘುನಾಥಗಂಜ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಸೋಮವಾರ ಬೆಳಗ್ಗೆ ಮಗುವನ್ನು ಎತ್ತಕೊಂಡು ಬಂದ ಮಹಿಳೆಯು ಸೇತುವೆ ಮೇಲೆ ಏರಿದ್ದಾರೆ ಎಂಬುದು ತಿಳಿದಿದೆ. ಈ ಮಹಿಳೆ ಸೇತುವೆ ಮೇಲೆ ಓಡಾಡುತ್ತಿದ್ದುದನ್ನು ಕಂಡು ಕೆಲವರಿಗೆ ಅನುಮಾನ ಬಂದಿತ್ತು. ಅವರು ಮಹಿಳೆಯನ್ನು ಹಿಡಿಯುವ ಮೊದಲೇ, ಮಹಿಳೆಯು ಕ್ಷಣಾರ್ಧದಲ್ಲೇ ತನ್ನ ತೋಳುಗಳಲ್ಲಿ ಇದ್ದ ಮಗುವನ್ನು ಎಸೆದಿದ್ದಾರೆ. ಇದೇ ಸಮಯದಲ್ಲಿ ಆ ಸೇತುವೆಯ ಪಕ್ಕದಲ್ಲಿ ದೋಣಿಯೊಂದು ದಾಟುತ್ತಿತ್ತು. ಇಬ್ಬರು ಯುವಕರು ಕೂಡಲೇ ಗಂಗಾನದಿಯಲ್ಲಿ ಹಾರಿ ದೋಣಿಯೊಂದರ ಸಹಾಯದಿಂದ ಮಗುವನ್ನು ರಕ್ಷಣೆ ಮಾಡಿದರು. ಸದ್ಯ ಮಗು ಜಂಗಿಪುರ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಪೊಲೀಸರಿಂದ ತನಿಖೆ ಆರಂಭ:ಮಾಹಿತಿ ಪಡೆದ ರಘುನಾಥಗಂಜ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವಿನ ತಾಯಿ ರೋಕೆಯಾ ಬೀಬಿಯನ್ನು ಈಗಾಗಲೇ ಬಂಧಿಸಲಾಗಿದೆ. ರಘುನಾಥಗಂಜ್ ಪೊಲೀಸ್ ಠಾಣೆಯ ಮೊಹಲ್ದರ್‌ಪಾರಾದಲ್ಲಿ ವಾಸವಾಗಿದ್ದಾರೆ. ಮಹಿಳೆಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರಘುನಾಥಗಂಜ್ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ಮಗುವನ್ನು ರಕ್ಷಿಸಿದ ಯುವಕ ಹೇಳಿದ್ದೇನೆ?:ಮಗುವನ್ನು ರಕ್ಷಿಸಿದ ರಾಜ್‌ಕುಮಾರ್ ಮಹತ್ ಮಾತನಾಡಿ, "ನಾವು ನಾಲ್ಕೈದು ಸ್ನೇಹಿತರು ಗಂಗಾನದಿಯ ದಡದಲ್ಲಿರುವ ದೇವಸ್ಥಾನದಲ್ಲಿ ಮಾತನಾಡುತ್ತಿದ್ದೆವು. ಇದ್ದಕ್ಕಿದ್ದಂತೆ ನೀರಿನಲ್ಲಿ ಏನೋ ಬೀಳುತ್ತಿರುವುದನ್ನು ನಾನು ನೋಡಿದೆ. ಮೊದಲಿಗೆ ಅದು ಗೋಣಿಚೀಲ ಇರಬಹುದು ಎಂದು ನಾನು ಭಾವಿಸಿದೆವು. ನಾನು ತಲೆಯೆತ್ತಿ ನೋಡಿದೆ. ಸೇತುವೆಯ ಮೇಲೆ ಜನಸಂದಣಿ, ಹತ್ತು ಸೆಕೆಂಡುಗಳಲ್ಲಿ ಗಂಗಾನದಿಯಲ್ಲಿ ಮಗು ಪತ್ತೆಯಾಗಿದೆ. ಮಗು ತೇಲುತ್ತಿರುವುದನ್ನು ನಾನು ನೋಡಿದೆ. ನಾನು ತಕ್ಷಣವೇ ನೀರಿಗೆ ಹಾರಿದೆ. ತನ್ನ ಮಗುವನ್ನು ಎಸೆದ ನಂತರ ಮಹಿಳೆ ಕೂಡ ಗಂಗಾನದಿಗೆ ಹಾರಲು ಪ್ರಯತ್ನಿಸಿದಳು. ಆದರೆ, ಸೇತುವೆಯ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದವರು ಆಕೆಯನ್ನು ತಡೆದರು.

ಕುಟುಂಬ ಮೂಲಗಳ ಪ್ರಕಾರ, ಕುಟುಂಬದಲ್ಲಿ ಸ್ವಲ್ಪ ಸಮಯ ಕಲಹ ಇತ್ತು. ಪತಿಯೊಂದಿಗೆ ಸಂಬಂಧ ಹಳಸಿದ್ದರಿಂದ ಮಹಿಳೆ ಖಿನ್ನತೆಗೆ ಒಳಗಾಗಿದ್ದರು. ಈ ಹಿಂದೆಯೂ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಕುಟುಂಬದ ಮೂಲಗಳು ಬಹಿರಂಗಪಡಿಸಿವೆ. ಬಂಧಿತ ಮಹಿಳೆಯನ್ನು ಜಂಗೀಪುರ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ:13 ಕೋಟಿ ರೂ. ಮೌಲ್ಯದ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್‌ಎಫ್‌

ABOUT THE AUTHOR

...view details