ಕರ್ನಾಟಕ

karnataka

ಚೀನಾ-ಭಾರತದ ನಿಷೇಧಿತ ಪ್ರದೇಶದಲ್ಲಿ ವಾಸ: ನಾನು ಪಾರ್ವತಿ ದೇವಿ ಅವತಾರ ಎನ್ನುತ್ತಿರುವ ಮಹಿಳೆ..ಕಾರಣ?

By

Published : Jun 4, 2022, 12:24 PM IST

ಭಾರತ - ಚೀನಾ ಗಡಿ ಬಳಿಯ ನಿಷೇಧಿತ ಪ್ರದೇಶದಲ್ಲಿ ಹರ್ಮಿಂದರ್ ಸಿಂಗ್ ಎಂಬ ಮಹಿಳೆ ನೆಲೆಸಿದ್ದು, ತಾನು ಪಾರ್ವತಿ ದೇವಿಯ ಅವತಾರವೆಂದೂ ಹಾಗೂ ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದಾರೆ.

ಕೈಲಾಸ ಪರ್ವತ
ಕೈಲಾಸ ಪರ್ವತ

ಪಿಥೋರಗಢ/ಉತ್ತರಾಖಂಡ: ಇಂಡೋ - ಚೀನಾ ಗಡಿ ಸಮೀಪದಲ್ಲಿರುವ ನಿಷೇಧಿತ ಪ್ರದೇಶವಾದ ನಾಭಿದಂಗ್ ಬಳಿ ಲಖನೌದ ಅಲಿಗಂಜ್ ಪ್ರದೇಶದ ನಿವಾಸಿಯಾಗಿರುವ ಮಹಿಳೆಯೊಬ್ಬರು ವಾಸಿಸುತ್ತಿದ್ದು, ತಾನು ಪಾರ್ವತಿ ದೇವಿಯ ಅವತಾರ ಹಾಗೂ ಕೈಲಾಸ ಪರ್ವತದಲ್ಲಿದ್ದೇನೆ ಎಂದು ಅಚ್ಚರಿ ಹೇಳಿಕೆ ನೀಡುವ ಮೂಲಕ ಗಡಿಯಿಂದ ವಾಪಸ್​ ಬರಲು ನಿರಾಕರಿಸಿದ್ದಾರೆ.

ಭಾರತ - ಚೀನಾ ಗಡಿ ಬಳಿಯ ನಿಷೇಧಿತ ಪ್ರದೇಶದಲ್ಲಿ ಹರ್ಮಿಂದರ್ ಸಿಂಗ್ ಎಂಬ ಮಹಿಳೆ ನೆಲೆಸಿದ್ದು, ಮನೆಗೆ ಮರಳಲು ನಿರಾಕರಿಸಿದ್ದಾರೆ. ತಾನು ಪಾರ್ವತಿ ದೇವಿಯ ಅವತಾರವೆಂದೂ, ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದಾಳೆ. ಇಲ್ಲಿನ ಆಡಳಿತವು ಹರ್ಮಿಂದರ್ ಸಿಂಗ್​ನನ್ನು ವಾಪಸ್​ ಕಳುಹಿಸಲು ಪ್ರಯತ್ನಿಸಿತು. ಆದರೆ, ಮಹಿಳೆ ಬಲವಂತವಾಗಿ ಹೊರಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ತೆರಳಿದ್ದ ಪೊಲೀಸ್ ತಂಡ ಬರಿಗೈಯಲ್ಲಿ ಮರಳಿದೆ ಎಂದು ಪಿಥೋರಗಢ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ.

ಹರ್ಮಿಂದರ್ ಸಿಂಗ್, ಧಾರ್ಚುಲಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರಿಂದ 15 ದಿನಗಳ ಅನುಮತಿ ಮೇರೆಗೆ ತನ್ನ ತಾಯಿಯೊಂದಿಗೆ ಹೋಗಿದ್ದರು. ಆದರೆ, ಮೇ 25 ರಂದು ಅವರ ಅನುಮತಿ ಅವಧಿ ಮುಗಿದ ನಂತರವೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದಾರೆ. ಆದರೆ, ಅವರನ್ನು ಬಲವಂತವಾಗಿ ಧಾರ್ಚುಲಾಗೆ ಕರೆತರಲು ದೊಡ್ಡ ತಂಡವನ್ನು ಕಳುಹಿಸಲು ಪೊಲೀಸ್ ಆಡಳಿತ ಈಗ ನಿರ್ಧರಿಸಿದೆ. ಮಹಿಳೆಯನ್ನು ಕರೆತರಲು 12 ಸದಸ್ಯರ ಪೊಲೀಸ್ ತಂಡವನ್ನು ನಾಭಿದಂಗ್‌ಗೆ ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದರು.

ಇನ್ನು ಪಾರ್ವತಿ ದೇವಿಯ ಅವತಾರವೆಂದು ಹೇಳಿಕೊಂಡಿರುವ ಈ ಮಹಿಳೆ ಮಾನಸಿಕವಾಗಿ ಸದೃಢವಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:ಹರಿದ್ವಾರ ಅರ್ಧಕುಂಭದಲ್ಲಿ ಬಾಂಬ್​ ಸ್ಫೋಟಿಸುವ ಪ್ಲಾನ್​.. ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ

ABOUT THE AUTHOR

...view details