ಕರ್ನಾಟಕ

karnataka

ETV Bharat / bharat

ಪ್ರಿಯಕರನೊಂದಿಗೆ ಸೇರಿ ಮಕ್ಕಳ ಕೊಲೆಗೈದ ಪಾಪಿ ತಾಯಿ : ನಗರಸಭೆ ಸದಸ್ಯ ಸೇರಿ ಆರು ಜನರ ಬಂಧನ

ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಮಕ್ಕಳನ್ನು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

By

Published : Mar 25, 2023, 12:44 PM IST

ಮಕ್ಕಳ ಕೊಲೆ ಪ್ರಕರಣ
ಮಕ್ಕಳ ಕೊಲೆ ಪ್ರಕರಣ

ಮೀರತ್​ (ಉತ್ತರಪ್ರದೇಶ): ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯ ಸೇರಿ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ: ಮಾರ್ಚ್​22 ರಂದು ಆರೋಪಿ ಮಹಿಳೆ, ಪ್ರಿಯಕರನೊಂದಿಗೆ ಸೇರಿ ತನ್ನ 10 ವರ್ಷದ ಮಗ ಮತ್ತು 6 ವರ್ಷದ ಮಗಳನ್ನು ಹತ್ಯೆಗೈದಿದ್ದಾರೆ. ಬಳಿಕ ಮೃತ ದೇಹಗಳನ್ನು ಕಾಲುವೆಗೆ ಎಸೆದಿದ್ದಾರೆ. ಮೊದಲಿಗೆ 6 ವರ್ಷದ ಮಗಳನ್ನು ಮನೆಯಲ್ಲಿ ಹತ್ಯೆ ಮಾಡಿ, ಬಳಿಕ 10 ವರ್ಷದ ಮಗನನ್ನು ನೆರೆಯ ಮನೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಮಹಿಳೆಯ ಪ್ರಿಯಕರ ಸೌದ್​ ಎಂಬುವರು ಸ್ಥಳೀಯ ನಗರಸಭೆ ಸದಸ್ಯನಾಗಿದ್ದಾರೆ.​ ಇನ್ನು ಇಬ್ಬರ ಮಕ್ಕಳ ಹತ್ಯೆ ಪ್ರಕರಣದಲ್ಲಿ ನೆರೆಯವರು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆ ಮೂವರು ಮಹಿಳೆಯರು ಮತ್ತು ಮೂವರು ಪುರುಷರನ್ನು ಬಂಧಿಸಿಲಾಗಿದೆ. ಮೃತ ಮಕ್ಕಳ ದೇಹಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ.

ಹೆಂಡತಿಕೊಂದು ದೇಹ ತುಂಡರಿಸಿದ ಪತಿ:ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಪ್ರಕರಣವೊಂದರಲ್ಲಿ, ಪತಿಯೇ ತನ್ನ ಪತ್ನಿಯನ್ನು ಹತ್ಯೆಗೈದಿರುವ ಘಟನೆ 2 ದಿನಗಳ ಹಿಂದೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಮೂರು ಭಾಗಗಳಾಗಿ ಬೇರ್ಪಡಿಸಿ ಹೂತು ಹಾಕಿದ್ದಾರೆ. ಮುಮ್ತಾಜ್ ಶೇಖ್ (35) ಮೃತ ಮಹಿಳೆ. ಆರೋಪಿ ಪತಿ ಅಲೀಂ ಶೇಖ್​ನನ್ನು ಬಂಧಿತ ಆರೋಪಿ.

ಆರೋಪಿ ಅಲೀಂ ಶೇಖ್​ ಗಾರೆ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆಂದು ಮುಮ್ತಾಜ್ ಪತಿಯೊಂದಿಗೆ ಹೊರಗೆ ಹೋಗಿದ್ದಳು. ಬಳಿಕ ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಅಲೀಂ ಮಾತ್ರ ಎಂದಿನಂತೆ ರಾತ್ರಿ ತನ್ನ ಮನೆಗೆ ಮರಳಿದ್ದ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತೆ ಮೆರೆಗೆ ಅಲೀಂನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಪತ್ನಿಯನ್ನು ಹತ್ಯೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶವ ತುಂಡರಿಸಿ ಹೂತು ಹಾಕಿದ್ದ ಪಾಪಿ: ಪತ್ನಿ ಮುಮ್ತಾಜ್​ ರನ್ನು ಹತ್ಯೆ ಬಗ್ಗೆ ಅಲೀಂ ಶೇಖ್ ವಿಚಾರಣೆ ವೇಳೆ​ ಸತ್ಯವನ್ನು ಬಾಯ್ಬಿಟ್ಟ ಬೆನ್ನಲ್ಲೇ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ತನ್ನ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ, ಬಳಿಕ ಶವವನ್ನು ಮೂರು ಭಾಗಗಳಾಗಿ ತುಂಡರಿಸಲಾಗಿತ್ತು. ಇದಾದ ನಂತರ ಶವದ ಭಾಗಗಳನ್ನು ಬಿಷ್ಣುಪುರದ ಸರ್ದಾ ಗಾರ್ಡನ್ ಪ್ರದೇಶದಲ್ಲಿರುವ ಕರೆಯ ಮಣ್ಣಿನಲ್ಲಿ ಹೂತು ಹಾಕಿರುವುದಾಗಿ ಆರೋಪಿ ಪತಿ ಬಹಿರಂಗ ಪಡಿಸಿದ್ದರು. ನಂತರ ಪೊಲೀಸರು, ಆರೋಪಿ ಪತಿಯನ್ನು ಕರೆತಂದು ಶವ ವಶಪಡಿಸಿಕೊಂಡಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ, ಇದೊಂದು ಯೋಜಿತ ಕೊಲೆಯಾಗಿದ್ದು, ಪ್ರಕರಣದಲ್ಲಿ ಬಂಧಿತನ ಹೊರತುಪಡಿಸಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ:ಪತ್ನಿಯ ಕೊಂದು ಮೂರು ಭಾಗಗಳಾಗಿ ಶವ ತುಂಡರಿಸಿ ಹೂತು ಹಾಕಿದ ಪತಿ!

ABOUT THE AUTHOR

...view details