ಕರ್ನಾಟಕ

karnataka

ETV Bharat / bharat

ಆಕ್ಸ್‌ಫರ್ಡ್‌ ವಿವಿಯಲ್ಲಿ ಉಡುಪಿ ಮೂಲದ ವಿದ್ಯಾರ್ಥಿನಿಗೆ ಜನಾಂಗೀಯ ನಿಂದನೆ: ರಾಜ್ಯಸಭೆಯಲ್ಲಿ ಜೈಶಂಕರ್‌ ಹೇಳಿದ್ದೇನು? - ಭಾರತೀಯ ವಿದ್ಯಾರ್ಥಿ ಮೇಲೆ ಜನಾಂಗೀಯ ನಿಂದನೆ

ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್​ ಅವರ ವಿರುದ್ಧ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ನಿಂದನೆ ನಡೆದ ಬಗ್ಗೆ ಸದನದಲ್ಲಿ ಅಶ್ವಿನಿ ವೈಷ್ಣವ್ ಅವರು ಬೆಳಕು ಚೆಲ್ಲಿದ್ದರು. ಇದೇ ವಿಚಾರವಾಗಿ ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್​.ಜೈಶಂಕರ್ ಮಾತನಾಡಿದ್ದಾರೆ.

Jaishankar
Jaishankar

By

Published : Mar 15, 2021, 4:48 PM IST

ನವದೆಹಲಿ: ಬ್ರಿಟನ್‌ನ ಆಕ್ಸ್​ಫರ್ಡ್​​ ವಿಶ್ವವಿದ್ಯಾಲಯದಲ್ಲಿ ನಡೆದ ಜನಾಂಗೀಯ ನಿಂದನೆ ಬಗ್ಗೆ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್.​​ ಜೈಶಂಕರ್ ಮಾತನಾಡಿದ್ದು, ಅಗತ್ಯವಿದ್ದಾಗ ಈ ಪ್ರಕರಣಗಳನ್ನು ಭಾರತ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಸದನದಲ್ಲಿ ಭಾಗಿಯಾಗಿ ಪ್ರತಿಕ್ರಿಯೆ ನೀಡಿದ ಅವರು​, ಭಾರತ, ಮಹಾತ್ಮ ಗಾಂಧಿಯವರ ಜನ್ಮಭೂಮಿಯಾಗಿದ್ದು, ನಮ್ಮ ದೇಶದಲ್ಲಿ ಜನಾಂಗೀಯ ನೀತಿಗಳಿಗೆ ಅವಕಾಶವಿಲ್ಲ. ಸೂಕ್ತ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿ ಜನಾಂಗೀಯ ನಿಂದನೆ ಬಗ್ಗೆ ಬ್ರಿಟನ್​ ಜತೆ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.

ಸದನದಲ್ಲಿ ಮಾತನಾಡಿದ ಎಸ್​​.ಜೈಶಂಕರ್​

ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್​ ಅವರ ವಿರುದ್ಧ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ನಿಂದನೆ ನಡೆದ ಬಗ್ಗೆ ಸದನದಲ್ಲಿ ಅಶ್ವಿನಿ ವೈಷ್ಣವ್ ಅವರು ಬೆಳಕು ಚೆಲ್ಲಿದ್ದರು. ಇದೇ ವಿಚಾರವಾಗಿ ಸದನದಲ್ಲಿ ಎಸ್​.ಜೈಶಂಕರ್ ಮಾತನಾಡಿದ್ದಾರೆ. ಬ್ರಿಟನ್​ ನಮಗೆ ಮಿತ್ರರಾಷ್ಟ್ರವಾಗಿದ್ದು, ಆ ದೇಶದೊಂದಿಗೆ ಯಾವುದೇ ವಿಷಯದಲ್ಲಿ ವ್ಯವಹಾರ ನಡೆಸುವಾಗ ಅತ್ಯಂತ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದಿರುವ ಅವರು, ಅಗತ್ಯವಿದ್ದಾಗ ಇಂತಹ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಜನಾಗೆ ಜಸ್ಪ್ರೀತ್ ಕ್ಲೀನ್ ಬೌಲ್ಡ್‌! ಬದುಕಿನ 2ನೇ ಇನ್ನಿಂಗ್ಸ್‌ ಆರಂಭಿಸಿದ ಬುಮ್ರಾ

ಕರ್ನಾಟಕದ ಉಡುಪಿ ಮೂಲದ ಸಮಂತ್ ಆಕ್ಸಫರ್ಡ್​​ ವಿವಿ ವಿದ್ಯಾರ್ಥಿ ಸಂಘದ ಮೊದಲ ಭಾರತೀಯ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ ವಿರುದ್ಧ ಜನಾಂಗೀಯ ನಿಂದನೆ ವ್ಯಕ್ತವಾಗುತ್ತಿದ್ದಂತೆ ಕೇವಲ 5 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ABOUT THE AUTHOR

...view details