ಜಲಪೈಗುರಿ (ಪಶ್ಚಿಮ ಬಂಗಾಳ) :ಆಸ್ಪತ್ರೆಗಳೂ ಭ್ರಷ್ಟಾಚಾರ, ವಂಚನೆಯ ಕೂಪವಾಗಿವೆ. ಒಂದು ವರ್ಷದ ಹಿಂದೆಯೇ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಈಗಲೂ ಡಯಾಲಿಸಿಸ್ ಮಾಡಿದ ಬಿಲ್ ಪಾವತಿಯಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಈ ವಂಚನೆಯ ಘಟನೆ ನಡೆದಿದೆ. ಸುಮಾರು 1 ವರ್ಷದಿಂದ ಮೃತ ರೋಗಿಯ ಹೆಸರಿನಲ್ಲಿ ಡಯಾಲಿಸಿಸ್ಗಾಗಿ ನಕಲಿ ಬಿಲ್ಗಳನ್ನು ಸಲ್ಲಿಸಿ ಹಣವನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಈಟಿವಿ ಭಾರತ್ ನಡೆಸಿದ ಕಾರ್ಯಾಚರಣೆಯಲ್ಲಿ ಈ ವಂಚನೆ ಪ್ರಕರಣ ಬಯಲಾಗಿದೆ.
ಘಟನೆಯೇನು? :ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಬಹದ್ದೂರ್ ಬಿಸ್ವಕರ್ಮ ಎಂಬುವರು ಮೂತ್ರಪಿಂಡ ಕಾಯಿಲೆಗೆ ಒಳಗಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. 1 ವರ್ಷದ ಹಿಂದೆಯೇ ಕಾಯಿಲೆ ಗುಣಮುಖವಾಗದೇ 2021ರ ಜೂನ್ 23ರಂದು ಮೃತಪಟ್ಟಿದ್ದರು. ರೋಗಿ ಮೃತಪಟ್ಟು ವರ್ಷವಾದರೂ ಆತನ ಹೆಸರಿನಲ್ಲೇ ಆಸ್ಪತ್ರೆಯವರು ಡಯಾಲಿಸಿಸ್ ಮಾಡುತ್ತಿರುವ ನಕಲಿ ಬಿಲ್ಗಳನ್ನು ಸೃಷ್ಟಿಸಿ ಹಣ ಪಡೆದುಕೊಳ್ಳುತ್ತಿದ್ದರು. ಮಾಹಿತಿ ತಿಳಿದು, ಈ ಬಗ್ಗೆ ಈಟಿವಿ ಭಾರತ್ ಸುದ್ದಿ ಪ್ರಸಾರ ಮಾಡಿತ್ತು.