ಕರ್ನಾಟಕ

karnataka

By

Published : May 23, 2021, 10:46 PM IST

ETV Bharat / bharat

ಯಾಸ್ ಚಂಡಮಾರುತ : ಮೇ 26 ರಂದು ದಿಘಾ ಕರಾವಳಿ ಅಪ್ಪಳಿಸುವ ಸಾಧ್ಯತೆ

ಮೇ 26ರ ಮಧ್ಯಾಹ್ನ ಯಾಸ್​ನಿಂದ ಭೂಕುಸಿತವಾಗಲಿದೆ. ಇದು ಪಶ್ಚಿಮ ಬಂಗಾಳ-ಒಡಿಶಾ ಕರಾವಳಿಯ ಮೂಲಕ, ಪರಡ್ವಿಪ್ ಮತ್ತು ಸಾಗರ್ ದ್ವೀಪದ ನಡುವೆ ಪ್ರವೇಶಿಸಲಿದೆ..

west-bengal-cyclone-yaas-likely-to-hit-digha-coast-on-26-may
west-bengal-cyclone-yaas-likely-to-hit-digha-coast-on-26-may

ಕೋಲ್ಕತಾ :ಯಾಸ್ ಚಂಡಮಾರುತವು ಮೇ 26ರಂದು ದಿಘಾ ತೀರವನ್ನು ಅಪ್ಪಳಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಬಂಗಾಳ ಕೊಲ್ಲಿಯ ಪೂರ್ವ ಮಧ್ಯದಿಂದ ವಾತಾವರಣ ತೀವ್ರಗೊಂಡಿದೆ.

ಇದು ಈಗ ಪ್ಯಾರಾಡ್‌ವಿಪ್‌ನಿಂದ 590 ಕಿ.ಮೀ ಮತ್ತು ಬಾಲಸೋರ್‌ನಿಂದ 690 ಕಿ.ಮೀ ದೂರದಲ್ಲಿದೆ. ಹಾಗೆ ದಿಘಾದ ದಕ್ಷಿಣ ಮತ್ತು ಆಗ್ನೇಯದಿಂದ 670 ಕಿ.ಮೀದೂರಲ್ಲಿದೆ.

ಇದು ಸೋಮವಾರ ಬೆಳಗ್ಗೆ ತೀವ್ರಗೊಳ್ಳುತ್ತದೆ ಹಾಗೆ ನಂತರ ವಾಯವ್ಯಕ್ಕೆ ಚಲಿಸುತ್ತದೆ ಎಂದು ಅಲಿಪೋರ್ ಹವಾಮಾನ ಕಚೇರಿ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವು ಬಲಗೊಳ್ಳುತ್ತದೆ ಮತ್ತು ಸೂಪರ್ ಸೈಕ್ಲೋನ್ ಆಗಿ ಬದಲಾಗುತ್ತದೆ. ಹಾಗೆ ಮೇ 26ರ ಬೆಳಗ್ಗೆ ಈ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ಬಹಳ ಹತ್ತಿರ ಹೋಗಲಿದೆ ಎಂದು ಅಲಿಪೋರ್ ಹವಾಮಾನ ಕಚೇರಿಯ ಮುಖ್ಯಸ್ಥ ಸಂಜೀವ್ ಬಂಡ್ಯೋಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಮೇ 26ರ ಮಧ್ಯಾಹ್ನ ಯಾಸ್​ನಿಂದ ಭೂಕುಸಿತವಾಗಲಿದೆ. ಇದು ಪಶ್ಚಿಮ ಬಂಗಾಳ-ಒಡಿಶಾ ಕರಾವಳಿಯ ಮೂಲಕ, ಪರಡ್ವಿಪ್ ಮತ್ತು ಸಾಗರ್ ದ್ವೀಪದ ನಡುವೆ ಪ್ರವೇಶಿಸಲಿದೆ.

ಹಾಗೆ ಇದು ದಿಘಾ ಕರಾವಳಿಯಲ್ಲಿ ಅಪ್ಪಳಿಸಲಿದೆ. ಮಧ್ಯಾಹ್ನ ಭೂಮಿಗೆ ಪ್ರವೇಶಿಸಿದ ನಂತರ ಗಾಳಿಯು 155 ರಿಂದ 160 ಕಿ.ಮೀ. ವೇಗ ಪಡೆಯಲಿದೆ.

ABOUT THE AUTHOR

...view details