ಕರ್ನಾಟಕ

karnataka

ETV Bharat / bharat

'ಅಚ್ಛೇ ದಿನ್‌' ಹುಡುಕಲು ವಿಭಿನ್ನ ಪ್ರೊಟೆಸ್ಟ್​​​​​.. 51 ಅಡಿ ಎತ್ತರದ ಕ್ರೇನ್​ ಮೇಲೆ ಕುಳಿತ ನಗರಪಾಲಿಕೆ ಮಾಜಿ ಸದಸ್ಯ! - Punjab today news

ಪ್ರಧಾನಿ ನರೇಂದ್ರ ಮೋದಿಯವರ 2014ರ ಲೋಕಸಭೆ ಸ್ಲೋಗನ್​ 'ಅಚ್ಛೇ ದಿನ್​' ವಿರುದ್ಧವಾಗಿ ಪಂಜಾಬ್​​ನ ಬಟಿಂಡಾದ ನಗರಸಭೆ ಮಾಜಿ ಸದಸ್ಯನೋರ್ವ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾನೆ.

Former Bhatinda
Former Bhatinda

By

Published : Oct 8, 2021, 3:54 PM IST

ಬಟಿಂಡಾ(ಪಂಜಾಬ್​):ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ರಸ್ತೆ ತಡೆ ಸೇರಿದಂತೆ ವಿಭಿನ್ನವಾದ ರೀತಿಯಲ್ಲಿ ಪ್ರತಿಭಟನೆ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವಿನೂತನವಾದ ಪ್ರತಿಭಟನೆ ಮಾಡಿದ್ದಾನೆ.

ಪಂಜಾಬ್​ನ ಬಟಿಂಡಾದಲ್ಲಿ ಈ ಘಟನೆ ನಡೆದಿದ್ದು, ನಗರಪಾಲಿಕೆಯ ಮಾಜಿ ಸದಸ್ಯ ಬೈನಾಕ್ಯುಲರ್​​(ದೂರದರ್ಶನ) ಬಳಸಿ, ಅಚ್ಛೇ ದಿನ ಹುಡುಕಲು 51 ಅಡಿ ಎತ್ತರದ ಕ್ರೇನ್​ ಮೇಲೆ ಕುಳಿತಿದ್ದಾನೆ.

'ಅಚ್ಛೇ ದಿನ್‌' ಹುಡುಕಲು ವಿಭಿನ್ನ ಪ್ರೊಟೆಸ್ಟ್​​​​​

ಇದನ್ನೂ ಓದಿರಿ:ಕರ್ನಾಟಕ ಹೈಕೋರ್ಟ್​​​​ ನ್ಯಾಯಮೂರ್ತಿಗಳಾಗಿ ನೇಮಿಸಲು ನಾಲ್ವರ ಹೆಸರು ಶಿಫಾರಸು ಮಾಡಿದ ಸುಪ್ರೀಂ

ನಗರ ಪಾಲಿಕೆಯ ಕೌನ್ಸಿಲರ್​​ ಆಗಿರುವ ವಿಜಯ್​ ಕುಮಾರ್​ ಶರ್ಮಾ ಕೂಡ 'ಇಂಡಿಯಾ ಫಾರ್​ ಸೇಲ್​​' ಎಂಬ ಬ್ಯಾನರ್​ ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಅಚ್ಛೇ ದಿನ್​​ ಭರವಸೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details