ಕರ್ನಾಟಕ

karnataka

ಪ್ರಧಾನಿ ಮೋದಿ ಭೇಟಿಗೆ ಕೋರಿದ್ದೇನೆ, ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ: ನಿತೀಶ್​ ಕುಮಾರ್​

By

Published : Aug 6, 2021, 3:45 AM IST

Updated : Aug 6, 2021, 4:41 AM IST

ಸಮಾಜದಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದಿಲ್ಲ, ಎಲ್ಲವು ಸಂತಸದಿಂದ ಇರಲಿದೆ. ಪ್ರತಿಯೊಂದು ಸ್ತರದ ಜನರೂ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ. ಇಂತಹ ಗಣತಿಯು ಬ್ರಿಟಿಷ್ ಆಳ್ವಿಕೆಯಲ್ಲೂ ನಡೆದಿದೆ ಎಂದು ನಿತೀಶ್​ ಕುಮಾರ್​ ಹೇಳಿದ್ದಾರೆ.

Wanted To Meet PM, No Response Yet: Nitish Kumar
ಪ್ರಧಾನಿ ಮೋದಿಗೆ ಭೇಟಿಗೆ ಕೋರಿದ್ದೇನೆ, ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ: ನಿತೀಶ್​ ಕುಮಾರ್​

ನವದೆಹಲಿ:ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿ, ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಕೋರಿದ್ದೇನೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಹಿಂದೆ ನಿತೀಶ್​​ಕುಮಾರ್ ಅವರ ಜನತಾದಳ ಯುನೈಟೆಡ್ (ಜೆಡಿಯು) ನ ಸಂಸದರಿಗೂ ಕೂಡ ಪ್ರಧಾನಿ ಭೇಟಿಗೆ ನಿರಾಕರಿಸಲಾಗಿತ್ತು. ಬದಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವಂತೆ ತಿಳಿಸಲಾಗಿತ್ತು.

ಜಾತಿ ಗಣತಿಯು ಕೆಲವು ಜನರ ಅಸಮಾಧಾನಕ್ಕೆ ಕಾರಣವಾಗಲಿದೆ ಎಂಬುದು ಆಧಾರ ರಹಿತವಾಗಿದೆ. ಜಾತಿ ಗಣತಿ ಮಾಡುವುದು, ಬಿಡುವುದು ಕೇಂದ್ರಕ್ಕೆ ಬಿಟ್ಟ ವಿಚಾರವಾಗಿದೆ. ಅಭಿಪ್ರಾಯಗಳನ್ನು ತಿಳಿಸುವುದು ನಮ್ಮ ಕೆಲಸವಾಗಿದೆ. ಜಾತಿ ಗಣತಿಯನ್ನು ಒಂದು ಜಾತಿಯವರು ಒಪ್ಪುತ್ತಾರೆ, ಇನ್ನೊಂದು ಜಾತಿಯವರು ಒಪ್ಪುವುದಿಲ್ಲ ಎಂದು ಭಾವಿಸಬೇಡಿ. ಇದು ಎಲ್ಲರ ಹಿತಾಸಕ್ತಿ ಎಂದು ಅವರು ಹೇಳಿದ್ದಾರೆ.

ಸಮಾಜದಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದಿಲ್ಲ, ಎಲ್ಲವು ಸಂತಸದಿಂದ ಕೂಡಿರಲಿದೆ. ಪ್ರತಿಯೊಂದು ಸ್ತರದ ಜನರೂ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ. ಇಂತಹ ಗಣತಿಯು ಬ್ರಿಟಿಷ್ ಆಳ್ವಿಕೆಯಲ್ಲೂ ನಡೆದಿದೆ ಎಂದಿದ್ದಾರೆ.

ನಿತೀಶ್​ ಸರ್ಕಾರದ ಮಿತ್ರ ಪಕ್ಷವಾದ ಬಿಜೆಪಿ ಈ ಗಣತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಗಣತಿಯಿಂದ ಸಾಮಾಜಿಕ ಸೌಹಾರ್ದತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್​ ಕುಮಾರ್​, ಬಿಹಾರ ವಿಧಾನಸಭೆಯು ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸುವ ನಿರ್ಣಯ ಅಂಗೀಕರಿಸಿದಾಗ ಮತ್ತು ಅದನ್ನು ಕೇಂದ್ರಕ್ಕೆ ಕಳುಹಿಸಿದಾಗ ಬಿಜೆಪಿಯ ಯಾವುದೇ ಶಾಸಕರು ಆಕ್ಷೇಪ ಎತ್ತಲಿಲ್ಲ. ಆದರೆ ಕೆಲವೆಡೆಗಳಿಂದ ಯಾಕೆ ಆಕ್ಷೇಪ ಕೇಳಿಬರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಬಿಜೆಪಿ ಹೊರತುಪಡಿಸಿ, ಬಿಹಾರದ ಎಲ್ಲಾ ಪಕ್ಷಗಳು ಜಾತಿ ಗಣತಿಗೆ ಬೆಂಬಲ ಸೂಚಿಸಿವೆ. ಇತರೆ ಅಂದರೆ ಹೆಚ್​ಎಎಂ (ಹಿಂದುಸ್ತಾನ್ ಅವಾಮ್ ಮೋರ್ಚಾ) ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:'ಐ ಡೋಂಟ್​​ ಕೇರ್​​'... ಅಣ್ಣಾಮಲೈ ಮೇಕೆದಾಟು ಸತ್ಯಾಗ್ರಹಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

Last Updated : Aug 6, 2021, 4:41 AM IST

ABOUT THE AUTHOR

...view details