ಕರ್ನಾಟಕ

karnataka

By

Published : Jul 4, 2021, 11:23 AM IST

Updated : Jul 4, 2021, 12:53 PM IST

ETV Bharat / bharat

ಬೈಕ್ ಸ್ಕಿಡ್​ ಆಗಿ ಬಿದ್ದವರ ಮೇಲೆ ಹರಿದ ಲಾರಿ.. ಹಾರಿಹೋಯ್ತು ಮೂವರ ಪ್ರಾಣಪಕ್ಷಿ!

ಹೈದರಾಬಾದ್​ನಲ್ಲಿ ಬೈಕ್​ ಸ್ಕಿಡ್​ ಆಗಿ ನೆಲಕ್ಕೆ ಬಿದ್ದವರ ಮೇಲೆ ಬೃಹತ್ ಲಾರಿಯೊಂದು ಹರಿದಿದ್ದು, ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಮಹಾರಾಷ್ಟ್ರ ಮೂಲದವರೆಂದು ಗುರುತಿಸಲಾಗಿದೆ.

ಬೈಕ್ ಸ್ಕಿಡ್​ ಆಗಿ ನೆಲಕ್ಕೆ ಬಿದ್ದವರ ಮೇಲೆ ಹರಿದ ಲಾರಿ
ಬೈಕ್ ಸ್ಕಿಡ್​ ಆಗಿ ನೆಲಕ್ಕೆ ಬಿದ್ದವರ ಮೇಲೆ ಹರಿದ ಲಾರಿ

ಹೈದರಾಬಾದ್(ತೆಲಂಗಾಣ):ಬೈಕ್​ ಸ್ಕಿಡ್​ ಆಗಿ ಕೆಳಗೆ ಬಿದ್ದ ಯುವಕರ ಮೇಲೆ ವಾಹನವೊಂದು ಹರಿದಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ​ನಗರದಲ್ಲಿ ಸಂಭವಿಸಿದೆ. ಶಾಸ್ತ್ರಿಪುರಂನಿಂದ ಕಾರ್ಯಕ್ರಮವೊಂದನ್ನು ಮುಗಿಸಿ ಬರುವಾಗ ಈ ಅಪಘಾತ ನಡೆದಿದೆ.

ಬೈಕ್ ಸ್ಕಿಡ್​ ಆಗಿ ನೆಲಕ್ಕೆ ಬಿದ್ದವರ ಮೇಲೆ ಹರಿದ ಲಾರಿ

ಮೃತರನ್ನು ಮಹಾರಾಷ್ಟ್ರ ಮೂಲದ ಕಮರುದ್ದೀನ್, ಬಬ್ಲು, ಜಮೀಲ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೃತ ದುರ್ದೈವಿಗಳು ಲಂಗರ್​ಹೌಸ್​ನಲ್ಲಿ ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿ ಎಂದು ಪೊಲೀಸರು ಕರೆ ನೀಡಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ತ್ರಿಬಲ್ ರೈಡಿಂಗ್ ನಿಷೇಧವಿದ್ದರೂ, ಇಂಥ ಘಟನೆಗಳು ಪುನರಾವರ್ತನೆ ಆಗುತ್ತಿವೆ.

Last Updated : Jul 4, 2021, 12:53 PM IST

ABOUT THE AUTHOR

...view details