ಕರ್ನಾಟಕ

karnataka

By

Published : Jul 27, 2021, 4:05 PM IST

ETV Bharat / bharat

ತಮಿಳುನಾಡಿನ ಜಾತ್ರೆಯಲ್ಲಿ ಮಾನವನ ತಲೆ ಬುರುಡೆ ಪ್ರದರ್ಶಿಸಿದ್ದ 10 ಮಂದಿ ವಿರುದ್ಧ ಕೇಸ್‌

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಕುಲ್ಲುರಾಣಿ ಗ್ರಾಮದ ದೇವರ ಜಾತ್ರೆಯಲ್ಲಿ ಮಾನವನ ತಲೆ ಬುರುಡೆ ಪ್ರದರ್ಶನ ಸಂಬಂಧ ದೇವಾಲಯದ ಆಡಳಿತ ಮಂಡಳಿ, ಶಕ್ತಿ ಪೋತಿ ಸುದಲೈ ಮದಸ್ವಾಮಿ ದೇವಾಲಯದ ಕೆಲ ಸಂತರು ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Viral Video: A few "Samiyaadis" detained for allegedly eating human flesh during a festival
ವೈರಲ್‌ ವಿಡಿಯೋ: ಜಾತ್ರೆಯಲ್ಲಿ ಮಾನವನ ತಲೆ ಬುರುಡೆ ಪ್ರದರ್ಶಸಿದ್ದ 10 ಮಂದಿ ವಿರುದ್ಧ ಕೇಸ್‌

ತೆಂಕಾಸಿ(ತಮಿಳುನಾಡು):ಜಿಲ್ಲೆಯಕುಲ್ಲುರಾಣಿ ಎಂಬ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಮಾನವನ ತಲೆಬುರುಡೆ ಹಿಡಿದು ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕುಲ್ಲುರಾಣಿ ದೇವಸ್ಥಾನದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದಲ್ಲಿ ಮಾನವನ ಮಾಂಸ ತಿಂದಿರುವ ಆರೋಪವೂ ಕೇಳಿ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ಭಾರಿ ವೈರಲ್‌ ಆಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಾಲಯದ ಆಡಳಿತ ಮಂಡಳಿ, ಶಕ್ತಿ ಪೋತಿ ಸುದಲೈ ಮದಸ್ವಾಮಿ(ಕಾಟ್ಟು ಕೋವಿಲ್‌) ದೇವಾಲಯದ ಕೆಲ ಸಂತರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯಾವ ವ್ಯಕ್ತಿಯ ತಲೆ ಬರುಡೆಯನ್ನು ಪ್ರದರ್ಶಿಸಿದ್ದಾರೆ ಹಾಗೂ ಮಾನವನ ಮಾಂಸವನ್ನು ತಿಂದಿದ್ದಾರೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ: ದೇಗುಲದ ಆವರಣದಲ್ಲಿ ಇದೆಂಥಾ ಸಂಪ್ರದಾಯ?

ABOUT THE AUTHOR

...view details