ಕರ್ನಾಟಕ

karnataka

ETV Bharat / bharat

ಚಮೋಲಿಯಲ್ಲಿ ಪ್ರವಾಹ ಪರಿಸ್ಥಿತಿ: ಪರ್ವತದ ಅರ್ಧ ಭಾಗ ಕುಸಿತ - ಚಮೋಲಿಯಲ್ಲಿ ಪ್ರವಾಹ ಪರಿಸ್ಥಿತಿ

ಚಮೋಲಿ ಜಿಲ್ಲೆಯ ಘಂಗಾರಿಯಾದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಜನವಸತಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿಲ್ಲ. ಹೀಗಾಗಿ ಭಾರಿ ಅನಾಹುತ ತಪ್ಪಿದೆ. ಆದರೂ ಹೇಮಕುಂಡ್ ಸಾಹಿಬ್‌ಗೆ ಹೋಗುವ ಪ್ರಯಾಣಿಕರನ್ನು ತಡೆ ಹಿಡಿಯಲಾಗಿದೆ.

ಚಮೋಲಿಯಲ್ಲಿ ಪ್ರವಾಹ ಪರಿಸ್ಥಿತಿ
ಚಮೋಲಿಯಲ್ಲಿ ಪ್ರವಾಹ ಪರಿಸ್ಥಿತಿ

By

Published : Jul 20, 2022, 8:34 PM IST

ಚಮೋಲಿ:ಹೂಗಳ ಕಣಿವೆಯ ಪ್ರಮುಖ ನಿಲ್ದಾಣ ಘಂಗಾರಿಯಾ ಮುಖ್ಯ ಮಾರುಕಟ್ಟೆಯ ಮುಂಭಾಗದಲ್ಲಿಯೇ ಗುಡ್ಡ ಒಡೆದು ಲಕ್ಷ್ಮಣ ಗಂಗೆಗೆ ಬಿದ್ದಿದೆ. ಮೊದಲಿಗೆ ನಿಧಾನವಾಗಿ ಪರ್ವತದಿಂದ ಕಲ್ಲುಗಳು ಬೀಳುವ ಶಬ್ದ ಕೇಳಿಸಿದೆ. ಅದರ ನಂತರ ಇದ್ದಕ್ಕಿದ್ದಂತೆ ಪರ್ವತದ ಅರ್ಧ ಭಾಗವು ಮುರಿದು ಬೀಳಲು ಪ್ರಾರಂಭಿಸಿತು.

ಪರ್ವತದ ಅರ್ಧ ಭಾಗ ಕುಸಿತ

ಘಂಗಾರಿಯಾದಲ್ಲಿ ನೆರೆದಿದ್ದ ಜನರು ಪರ್ವತ ಕುಸಿಯುತ್ತಿರುವ ಚಿತ್ರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಆದರೆ, ಅದೃಷ್ಟವಶಾತ್​ ಗುಡ್ಡ ಒಡೆದಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ. ಮಳೆಗಾಲದಲ್ಲಿ ಭೂಕುಸಿತದ ಇಂತಹ ಅಪಾಯಕಾರಿ ಪರಿಸ್ಥಿತಿ ಎದುರಾಗುತ್ತಲೇ ಇರುತ್ತವೆ.

ಚಮೋಲಿ ಜಿಲ್ಲೆಯ ಘಂಗಾರಿಯಾದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಜನವಸತಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿಲ್ಲ. ಹೀಗಾಗಿ, ಭಾರಿ ಅನಾಹುತ ಸಂಭವಿಸಿದೆ. ಆದರೂ ಹೇಮಕುಂಡ್ ಸಾಹಿಬ್‌ಗೆ ಹೋಗುವ ಪ್ರಯಾಣಿಕರನ್ನು ನಿಲ್ಲಿಸಲಾಗಿದೆ. ನದಿಗಳ ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಈ ಬಗ್ಗೆ ಡಿಐಜಿ ಎಸ್‌ಡಿಆರ್‌ಎಫ್ ರಿಧಿಮ್ ಅಗರ್ವಾಲ್ ಮಾತನಾಡಿ, ಚಮೋಲಿ ಜಿಲ್ಲೆಯ ಘಂಗಾರಿಯಾದಿಂದ ಹೇಮಕುಂಡ್‌ಗೆ ಹೋಗುವ ಸುಮಾರು 30 ರಿಂದ 35 ಪ್ರಯಾಣಿಕರನ್ನು ಭದ್ರತಾ ಕಾರಣಗಳಿಂದ ತಡೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅದಾಗ್ಯೂ, ಹೇಮಕುಂಡ್ ಸಾಹಿಬ್‌ನಿಂದ ಹಿಂತಿರುಗುವ ಪ್ರಯಾಣಿಕರು ಧೋಂಡಾದ ಹೊಸ ಸೇತುವೆಯಿಂದ ಹಿಂತಿರುಗಬಹುದು. ಭಾರೀ ಮಳೆಯ ದೃಷ್ಟಿಯಿಂದ ಕೆಳಭಾಗದಲ್ಲಿರುವ ನದಿಗಳ ನೀರಿನ ಮಟ್ಟವನ್ನು ಸಹ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.

ಓದಿ:ವಿಡಿಯೋ: ಬರಗಾಲದಿಂದ ಅನ್ನದಾತನ ಕಣ್ಣೀರು.. ಬೆಳೆಯ ಮಧ್ಯೆ ಬಿದ್ದು ಗೊಳಾಡಿದ ರೈತ!

ABOUT THE AUTHOR

...view details