ಕರ್ನಾಟಕ

karnataka

ETV Bharat / bharat

ಹೈದರಾಬಾದ್‌ನಲ್ಲಿ ಪಿಆರ್​​​​ಜಿಡಿ ಪ್ರಯೋಗಾಲಯ ಉದ್ಘಾಟಿಸಿದ ವೆಂಕಯ್ಯ ನಾಯ್ಡು - ಪೀಡಿಯಾಟ್ರಿಕ್ ರೇರಾ ಜೆನೆಟಿಕ್ ಡಿಸಾರ್ಡರ್ ಲ್ಯಾಬೊರೇಟರಿ ಉದ್ಘಾಟನೆ

ಕೃಷಿ ನಮ್ಮ ಮೂಲ ಸಂಸ್ಕೃತಿ. ಕೃಷಿಗೆ ಅನೇಕ ವಿಧಗಳಲ್ಲಿ ರಕ್ಷಣೆ, ಪ್ರೋತ್ಸಾಹ ಬೇಕು. ಕೃಷಿ ಸಮುದಾಯವು ನಮ್ಮ ದೇಶದ ಬೆನ್ನೆಲು. ಇಂದಿಗೂ ದೇಶದ ಜನಸಂಖ್ಯೆಯ ಶೇ.60ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು..

ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು
Vice President M Venkaiah

By

Published : Feb 20, 2021, 6:36 PM IST

ಹೈದರಾಬಾದ್(ತೆಲಂಗಾಣ): ಇಂದು ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ (ಸಿಡಿಎಫ್‌ಡಿ) ಕೇಂದ್ರದ ಬೆಳ್ಳಿ ಮಹೋತ್ಸವ ನಡೆಯಿತು. ಈ ವೇಳೆ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಪೀಡಿಯಾಟ್ರಿಕ್ ರೇರಾ ಜೆನೆಟಿಕ್ ಡಿಸಾರ್ಡರ್ ಲ್ಯಾಬೊರೇಟರಿಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಿಡಿಎಫ್‌ಡಿ ಒಂದು ವಿಶಿಷ್ಟ ಸಂಸ್ಥೆಯಾಗಿದೆ. ಅಪರಾಧ ಪ್ರಮಾಣದಲ್ಲಿ ಅಸಹಜ ಹೆಚ್ಚಳವು ವಿಶ್ವದ ಪ್ರಮುಖ ಸಮಸ್ಯೆಯಾಗಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಸರಿಯಾದ ತೀರ್ಪು ನೀಡಲು ಮತ್ತು ವಿಪತ್ತುಗಳಿಗೆ ಪರಿಹಾರ ಒದಗಿಸಲು ಸಿಡಿಎಫ್​ಡಿ ನ್ಯಾಯಾಲಯಗಳು, ಎನ್ಐಎ, ಸಿಬಿಐಗೆ ಅತ್ಯಾಧುನಿಕ ಡಿಎನ್ಎ ಫಿಂಗರ್ ​​ಪ್ರಿಂಟಿಂಗ್​​ ಸೇವೆ ಒದಗಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾವು ಇದನ್ನು ಒಂದು ಅನನ್ಯ ಸಂಸ್ಥೆ ಎಂದು ಕರೆಯುತ್ತೇವೆ ಎಂದು ನಾಯ್ಡು ಹೇಳಿದರು.

ಓದಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ; ಕೇಂದ್ರಕ್ಕೆ ಸಿಎಂ ಜಗನ್ ಒತ್ತಾಯ

ಕೃಷಿ ನಮ್ಮ ಮೂಲ ಸಂಸ್ಕೃತಿ. ಕೃಷಿಗೆ ಅನೇಕ ವಿಧಗಳಲ್ಲಿ ರಕ್ಷಣೆ, ಪ್ರೋತ್ಸಾಹ ಬೇಕು. ಕೃಷಿ ಸಮುದಾಯವು ನಮ್ಮ ದೇಶದ ಬೆನ್ನೆಲು. ಇಂದಿಗೂ ದೇಶದ ಜನಸಂಖ್ಯೆಯ ಶೇ.60ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು.

ಜನರ ಜೀವನವನ್ನು ಉತ್ತಮಗೊಳಿಸುವುದು ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ABOUT THE AUTHOR

...view details