ಕರ್ನಾಟಕ

karnataka

ETV Bharat / bharat

ಪ್ರೇಮಿಗಳ ದಿನ: ಹಸಿರೇ ಉಸಿರು.. ಮರಗಳ ಮೇಲಿನ ಪ್ರೀತಿಗಾಗಿ ಏಕಾಂಗಿಯಾಗಿ ಉಳಿದ ಗಜೇಂದ್ರ ಯಾದವ್

ಪ್ರೇಮಿಗಳ ದಿನ -8 ಲಕ್ಷ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಿದ ಗಜೇಂದ್ರ ಯಾದವ್ - ಪ್ರಧಾನಿ ಮೋದಿಯವರಿಂದ ಮೆಚ್ಚುಗೆ

By

Published : Feb 14, 2023, 2:25 PM IST

Gajendra Yadav is a lover of trees
ಮರಗಳ ಪ್ರೇಮಿ ಗಜೇಂದ್ರ ಯಾದವ್

ಪಾಟ್ನಾ (ಬಿಹಾರ) :ಈ ಪ್ರೇಮಿಗಳ ದಿನದಂದು ಏಕಾಂಗಿಯಾಗಿ ಉಳಿದು ಮರಗಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ವಿಶೇಷವಾದ ವ್ಯಕ್ತಿಯೊಬ್ಬರು ಪರಿಸರಕ್ಕೆ ತಮ್ಮದೇ ಆದ ಅಳಿಲು ಸೇವೆ ಮಾಡುತ್ತಿದ್ದಾರೆ. ಈವರೆಗೆ ಸುಮಾರು 8 ಲಕ್ಷ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಆ ವ್ಯಕ್ತಿ ಯಾರೆಂದರೇ ಬಿಹಾರದ, ಪಿಪ್ರಾ ಗ್ರಾಮದ ನಿವಾಸಿ ಗಜೇಂದ್ರ ಯಾದವ್. ಇವರು ಮರಗಳನ್ನು ತಮ್ಮ ಕುಟುಂಬಸ್ಥರೆಂದು ತಿಳಿದು ಅವುಗಳೊಂದಿಗೆ ಏಕಾಂಗಿ ಜೀವನ ನಡೆಸುತ್ತಿದ್ದಾರೆ.

ಮರಗಳು ಪ್ರಕೃತಿ ವಿಕೋಪಗಳಿಗೆ ಅಥವಾ ಇನ್ನಿತರ ಸಂದರ್ಭದಲ್ಲಿ ಮರಗಳಿಗೆ ಹಾನಿಯಾದಾಗಲೆಲ್ಲ ಈ ವ್ಯಕ್ತಿ ಬೇಸರಗೊಳ್ಳುತ್ತಾನೆ. ಗಜೇಂದ್ರ ಯಾದವ್​ ಅವರು ನಾಲ್ವರ ಮಕ್ಕಳ ಪೈಕಿ ಮೊದಲ ಹಿರಿ ಮಗನಾಗಿದ್ದು, ದಸರಾ, ದೀಪಾವಳಿ, ರಕ್ಷಾ ಬಂಧನ ಮತ್ತು ದೇಶದಲ್ಲಿ ನಡೆಯುವ ಇನ್ನಿತರ ಎಲ್ಲಾ ಹಬ್ಬಗಳನ್ನು ಗಜೇಂದ್ರ ಮರಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಇವರು ಇನ್ನೂ ಮದುವೆ ಆಗದೆ ಅವಿವಾಹಿತರಾಗಿದ್ದು, ಅಲ್ಲಿನ ಪ್ರದೇಶದಲ್ಲಿರುವ ಎಲ್ಲ ಮರಗಳನ್ನು ಪಾಲನೆ ಮಾಡಲು ನಿರ್ಧರಿಸಿದ್ದಾರೆ.

ಗಜೇಂದ್ರ ಅವರ ಈ ನಿಸ್ವಾರ್ಥದ ಸೇವೆಯನ್ನು ಗುರುತಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಅವರು ಪಾಟ್ನಾಗೆ ಆಹ್ವಾನಿಸಿ ಮತ್ತು ಗೌರವಿಸಲಾಯಿತು. ಹಾಗೂ ಪ್ರಧಾನಿ ಮೋದಿಯವರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಒಮ್ಮೆ ಗಜೇಂದ್ರ ಅವರ ಮಾತಿನಂತೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಐಜಿಪಿ ಆಗಿರುವ ವಿಕಾಸ್ ವೈಭವ್ ಅವರು ಸೆಮಾರ್ಕೋಲ್ ತಿರುತ್ ಕಾಲುವೆ ಬಳಿಯ ಛೇದಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡಲು ಮಾವಿನ ಸಸಿ ನೆಟ್ಟಿದ್ದರು.

ಇದಾದ ಬಳಿಕ ಗಜೇಂದ್ರ ಒಂದರ ಹಿಂದೆ ಒಂದರಂತೆ ಅಲ್ಲಿ ಸಸಿಗಳನ್ನು ನೆಡಲು ಆರಂಭಿಸಿದರು. ಒಂದು ಕಾಲದಲ್ಲಿ ಕಳ್ಳತನ, ದರೋಡೆ, ಕೊಲೆ ಮತ್ತು ಅತ್ಯಾಚಾರಕ್ಕೆ ಹೆಸರುವಾಸಿ ಆಗಿದ ಪ್ರದೇಶವು ಇಂದು ನೆರೆಹೊರೆಯ ಪ್ರದೇಶದಿಂದ ಬಂದವರಿಗೆ ಉಳಿದುಕೊಳ್ಳುವ ಸುಂದರ ತಾಣವಾಗಿದೆ. ಇಂದು ಈ ಪ್ರದೇಶಕ್ಕೆ ವಿಕಾಸ್ ವೈಭವ್ ಎಂದು ಹೆಸರಿಡಲಾಗಿದೆ.

2003 ರಿಂದ ಅಭಿಯಾನ.. ಗಜೇಂದ್ರ ಅವರು ಮೊದಲ ಬಾರಿಗೆ 2003 ರಲ್ಲಿ ಸಸಿ ನೆಡುವ ಅಭಿಯಾನವನ್ನು ಪ್ರಾರಂಭಿಸಿದರು. ಇವರು ಆಯ್ಕೆ ಮಾಡಿಕೊಂಡ ಸಸಿಗಳು ಆಲದ, ಪಾಕಡ್ ಮತ್ತು ಬೇವಿನ ಸಸಿಗಳಾಗಿದ್ದವು. ಇನ್ನೂ ಇಷ್ಟೊಂದು ಮರಗಳನ್ನು ಬೆಳೆಸಲು ಕಾರಣ ಏನೆಂದು ಗಜೇಂದ್ರ ಅವರನ್ನು ಕೇಳಿದರೆ, ಮರಗಳು ಮಣ್ಣನ್ನು ರಕ್ಷಿಸುತ್ತವೆ ಮತ್ತು ಪಕ್ಷಿಗಳಿಗೆ ಆಶ್ರಯ ನೀಡುವುದರೊಂದಿಗೆ ಮಣ್ಣಿನ ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೂ ಮರಗಳು ಮನುಷ್ಯನ ಜೀವನಕ್ಕೆ ಅಗತ್ಯವಾದ ಆಮ್ಲಜನಕವನ್ನು ಬಿಡುಗಡೆ ಮಾಡುವ ಮೂಲಕ ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತವೆ ಎಂದರು.

ಇದಲ್ಲದೇ ಇವರು ಒಡ್ಡುಗಳು, ಕಾಲುವೆಗಳು, ರಸ್ತೆಗಳು, ಗ್ರಾಮಗಳ ಹೊರವಲಯ ಮತ್ತು ಶಾಲಾ ಆವರಣಗಳಲ್ಲಿನ ಖಾಲಿ ಜಾಗಗಳನ್ನು ಸಸಿಗಳನ್ನು ನೆಡಲು ಬಳಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಸಸಿಗಳ ಪೋಷಣೆ ಮತ್ತು ಪಾಲನೆಗೆ ನರ್ಸರಿಯನ್ನೂ ಸಿದ್ಧಪಡಿಸಿದ್ದು, ಸುಮಾರು 100 ಕ್ಕೂ ಹೆಚ್ಚು ಯುವಕರು ಗಜೇಂದ್ರನಿಗೆ ಮರಗಳ ನಿರ್ವಹಣೆ ಮಾಡಲು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಕೇವಲ ನಿರ್ವಹಣೆಗೆ ಮಾತ್ರ ಹೊರತಾಗಿ, ಮರ ಕಡಿಯುವವರ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ :'ಪ್ರೇಮಿಗಳ ದಿನ': ಪ್ರೀತಿಯ ಕೆಂಬಣ್ಣ ಎದೆಯಲ್ಲಿ ಹಸಿಹಸಿರು ನೆನಪುಗಳನ್ನು ಉಳಿಸಲಿ.. ವ್ಯಾಲೆಂಟೈನ್ಸ್ ಡೇ ಇತಿಹಾಸ

ABOUT THE AUTHOR

...view details