ಕರ್ನಾಟಕ

karnataka

By

Published : Oct 3, 2021, 3:10 PM IST

ETV Bharat / bharat

ಪತಂಜಲಿ ಯೋಗಪೀಠದಲ್ಲಿ ಸಾಧ್ವಿ ಅನುಮಾನಾಸ್ಪದ ಸಾವು

ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಸರಿಯಾದ ತನಿಖೆಯ ನಂತರ ಹಿಂದಿನ ಕಾರಣ ತಿಳಿಯುತ್ತದೆ ಎಂದು ಎಸ್​ಪಿ ಸಿಟಿ ಕಮಲೇಶ್ ಉಪಾಧ್ಯಾಯ ಹೇಳಿದ್ದಾರೆ..

ಪತಂಜಲಿ ಯೋಗಪೀಠದಲ್ಲಿ ಸಾಧ್ವಿ ಅನುಮಾನಾಸ್ಪದ ಸಾವು
ಪತಂಜಲಿ ಯೋಗಪೀಠದಲ್ಲಿ ಸಾಧ್ವಿ ಅನುಮಾನಾಸ್ಪದ ಸಾವು

ಹರಿದ್ವಾರ (ಉತ್ತರಾಖಂಡ) :ಪತಂಜಲಿ ಯೋಗಪೀಠದ ಶಾಖೆಯಾದ ವೈದಿಕ ಕನ್ಯಾ ಗುರುಕುಲದಲ್ಲಿರುವ ಸಾಧ್ವಿಯೊಬ್ಬರು ಅನುಮಾನಾಸ್ಪದ ರೀತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಸಾಧ್ವಿ ಮಧ್ಯಪ್ರದೇಶದ ನಿವಾಸಿಯಾಗಿದ್ದಾರೆ. ಅವರು 2018ರಿಂದ ಗುರುಕುಲದಲ್ಲಿ ಓದುತ್ತಿದ್ದಾರೆ. ಹಾಗೇ ಗುರುಕುಲದಲ್ಲಿ ಪಾಠ ಕೂಡ ಮಾಡುತ್ತಿದ್ದರು.

ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಸರಿಯಾದ ತನಿಖೆಯ ನಂತರ ಹಿಂದಿನ ಕಾರಣ ತಿಳಿಯುತ್ತದೆ ಎಂದು ಎಸ್​ಪಿ ಸಿಟಿ ಕಮಲೇಶ್ ಉಪಾಧ್ಯಾಯ ಹೇಳಿದ್ದಾರೆ.

ABOUT THE AUTHOR

...view details