ಕರ್ನಾಟಕ

karnataka

ಚಾರ್​ಧಾಮ್ ಯಾತ್ರೆ ಮತ್ತೆ ಮುಂದೂಡಿದ ಉತ್ತರಾಖಂಡ ಸರ್ಕಾರ

By

Published : Jun 15, 2021, 2:28 PM IST

ಚಾರ್​ಧಾಮ್​ನ ಯಾತ್ರಾ ಸ್ಥಳಗಳಾದ ಬದರೀನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮನೋತ್ರಿಗೆ ಯಾತ್ರಿಗಳ ಪ್ರವೇಶಕ್ಕೆ ನೀಡಲಾಗಿದ್ದ ಅನುಮತಿಯನ್ನು ಮತ್ತೆ ಮುಂದೂಡಲಾಗಿದೆ..

Uttarakhand: Order for opening Chardham Yatra postponed for 3 districts
ಚಾರ್​ಧಾಮ್ ಯಾತ್ರೆ ಮತ್ತೆ ಮುಂದೂಡಿದ ಉತ್ತರಾಖಂಡ ಸರ್ಕಾರ

ಡೆಹ್ರಾಡೂನ್, ಉತ್ತರಾಖಂಡ್ :ಚಾರ್​​​ಧಾಮ್​​ ಯಾತ್ರೆಯನ್ನ ಉತ್ತರಾಖಂಡ ಸರ್ಕಾರ ಮಂಗಳವಾರ ಮುಂದೂಡಿದೆ. ನೈನಿತಾಲ್ ಹೈಕೋರ್ಟ್‌ನಲ್ಲಿ ಯಾತ್ರೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಜೂನ್ 16ರ ನಂತರ ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುಬೋಧ್ ಯುನಿಯಾಲ್ ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ನೆಗೆಟಿವ್ ಇರುವ ಚಮೋಲಿ, ರುದ್ರಪ್ರಯಾಗ್, ಉತ್ತರಕಾಶಿ ಜಿಲ್ಲೆಗಳ ಜನತೆಗೆ ಚಾರ್​ಧಾಮ್​ ಯಾತ್ರೆ ಕೈಗೊಳ್ಳಲು ಅವಕಾಶ ನೀಡಿ ಸುಬೋಧ್ ಯುನಿಯಾಲ್ ಘೋಷಿಸಿದ ನಂತರ ಮತ್ತೆ ಚಾರ್​ ಧಾಮ್ ಯಾತ್ರೆ ಮುಂದೂಡಲಾಗಿದೆ.

ಇದನ್ನೂ ಓದಿ:ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ನೇಪಾಳದಲ್ಲಿ ಆರೋಪಿಯ ಬಂಧನ

ಉತ್ತರಾಖಂಡ ಸರ್ಕಾರ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜೂನ್ 22ರವರೆಗೆ ವಿಸ್ತರಣೆ ಮಾಡಿದೆ. ಈ ಲಾಕ್​ಡೌನ್ ಸಮಯದಲ್ಲಿ ಮಾರುಕಟ್ಟೆಗಳನ್ನು ತೆರೆಯಲು ವಾರದಲ್ಲಿ ಮೂರು ದಿನ ಅವಕಾಶ ನೀಡಲಾಗುತ್ತದೆ. ಆಟೋರಿಕ್ಷಾಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ABOUT THE AUTHOR

...view details