ಕರ್ನಾಟಕ

karnataka

By

Published : Feb 13, 2021, 4:47 AM IST

ETV Bharat / bharat

ಹಿಮನದಿ ಸ್ಫೋಟ: ಸುರಂಗದಲ್ಲಿ ಸಿಲುಕಿದ ಕಾರ್ಮಿಕ 5 ದಿನಗಳ ಬಳಿಕ ಫೋನ್​ ಕಾಲ್​ ರಿಸೀವ್!

ತೆಹ್ರಿ ಗರ್ವಾಲ್ ನಿವಾಸಿ ಜಿತೇಂದ್ರ ಧನೈ ಅವರು 2017ರಿಂದ ತಪೋವನದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ. ದುರಂತದ ನಂತರ ಆತ ಸುರಂಗದೊಳಗೆ ಸಿಕ್ಕಿಬಿದ್ದಿದ್ದಾನೆ. ಅಂದಿನಿಂದ ಕುಟುಂಬ ಸದಸ್ಯರು ಆತನ ಜತೆ ನಿರಂತರವಾಗಿ ಫೋನ್‌ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದರು. 5 ದಿನಗಳಿಂದ ಸುರಂಗದಲ್ಲಿ ಸಿಕ್ಕಿಬಿದ್ದ ಆತ ನಿನ್ನೆ ತನ್ನ ತಂಗಿಯ ಪೋನ್​ ಕರೆ ಸ್ವೀಕರಿಸಿ ಹಲೋ ಎಂದು ಪ್ರತಿಕ್ರಿಯಿಸಿದ್ದಾನೆ.

ಹಿಮನದಿ ಸ್ಫೋಟ
ಹಿಮನದಿ ಸ್ಫೋಟ

ಡೆಹ್ರಾಡೂನ್:ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ನೀರ್ಗಲ್ಲು ಕುಸಿತದ ಪರಿಣಾಮ ಉಂಟಾಗಿದ್ದ ಪ್ರವಾಹದಲ್ಲಿ ನಾಪತ್ತೆಯಾದವರಿಗಾಗಿ ಶೋಧಕಾರ್ಯ ಆರನೇ ದಿನಕ್ಕೆ ಕಾಲಿಟ್ಟಿದೆ. ಒಳಗೆ ಸಿಲುಕಿರುವ ಓರ್ವ ಕಾರ್ಮಿಕ ತನ್ನ ಮನೆಯ ಸದಸ್ಯರ ಫೋನ್​ ಕರೆ ಸ್ವೀಕರಿಸಿದ್ದಾನೆ ಎಂಬ ಅಚ್ಚರಿ ಸಂಗತಿ ತಿಳಿದುಬಂದಿದೆ.

ಈ ಮಾಹಿತಿ ಹೊರಬರುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲಾ ಪಡೆಗಳು ತಮ್ಮ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಬೇಕಿದೆ. ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರು ಇನ್ನೂ ಜೀವಂತವಾಗಿ ಇರುಬಹುದು.

5 ದಿನಗಳಿಂದ ಸುರಂಗದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ತನ್ನ ತಂಗಿಯ ಪೋನ್​ ಕರೆ ಸ್ವೀಕರಿಸಿ ಹಲೋ ಎಂದು ಪ್ರತಿಕ್ರಿಯಿಸಿದ್ದಾನೆ. ತೆಹ್ರಿ ಗರ್ವಾಲ್ ನಿವಾಸಿ ಜಿತೇಂದ್ರ ಧನೈ ಅವರು 2017ರಿಂದ ತಪೋವನದ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ. ದುರಂತದ ನಂತರ ಆತ ಸುರಂಗದೊಳಗೆ ಸಿಕ್ಕಿಬಿದ್ದಿದ್ದಾನೆ. ಅಂದಿನಿಂದ ಕುಟುಂಬ ಸದಸ್ಯರು ಆತನ ಜತೆ ನಿರಂತರವಾಗಿ ಫೋನ್‌ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದರು.

ಈಟಿವಿ ಭಾರತ ಜತೆ ಮಾತನಾಡಿದ ಕಾರ್ಮಿಕನ ಸಹೋದರಿ

ಸತತ ಐದು ದಿನಗಳಿಂದ ಸಹೋದರಿ ತನ್ನ ಅಣ್ಣನ ನಂಬರ್​ಗೆ ಕಾಲ್ ಮಾಡುತ್ತಿದ್ದಾಳೆ. 'ಐದು ದಿನಗಳಿಂದ ಅಣ್ಣನ ಫೋನ್ ರಿಂಗ್ ಆಗುತ್ತಿದೆ. ಆದರೆ ರಿಸೀವ್ ಮಾಡಿರಲಿಲ್ಲ. ನಿನ್ನೆ ಇದ್ದಕ್ಕಿಂದ್ದಂತೆ ಫೋನ್​ ಎತ್ತಿದ ಅಣ್ಣ ಹಲೋ ಅಂತ ಹೇಳಿದ. ಈ ನಂತರ ಫೋನ್ ಕಟ್ ಆಯಿತು' ಎಂದು 'ಈಟಿವಿ ಭಾರತ'ಗೆ ಜೀತೇಂದ್ರ ಧನೈ ಅವರ ಸಹೋದರಿ ಸೀಮಾ ತಿಳಿಸಿದ್ದಾರೆ.

ಫೋನ್​ ಕರೆ ಕಟ್ ಆದ ನಂತರ ಜಿತೇಂದ್ರ ಅವರ ಮನೆಯಲ್ಲಿ ಭೀತಿ ಉಂಟಾಯಿತು. ಜಿತೇಂದ್ರ ಕಳೆದ 5 ದಿನಗಳಿಂದ ಸುರಂಗದಲ್ಲಿ ಸಿಲುಕಿಕೊಂಡಿದ್ದಾನೆ. ಈಗಲೂ ಆತ ಜೀವಂತ ಇರುವ ಲಕ್ಷಣಗಳು ಸ್ಪಷ್ಟವಾಗಿವೆ.

ಈಟಿವಿ ಬ್ಯೂರೋ ಮುಖ್ಯಸ್ಥ ಕಿರಣಕಾಂತ್ ಶರ್ಮಾ ಅವರೊಂದಿಗೆ ಮಾತನಾಡಿದ ಸೀಮಾ, ಸತತ ಐದು ದಿನಗಳಿಂದ ಕರೆ ಮಾಡುತ್ತಿದ್ದೇನೆ. ಅಣ್ಣನ ಫೋನ್ ನಿರಂತರವಾಗಿ ರಿಂಗ್ ಆಗುತ್ತಿತ್ತು. ನಿನ್ನೆ ಕೂಡ ಆತನ ಫೋನ್ ರಿಂಗಾಯಿತು. ಆತ ಹಲೋ ಅಂದ ನಂತರ ಫೋನ್ ನಿಂತುಹೋಯಿತು. ಅವನ ಧ್ವನಿ ಕೇಳಿದ ನಂತರ ಸುರಂಗದೊಳಗೆ ನನ್ನ ಸಹೋದರ ಇನ್ನೂ ಜೀವಂತವಾಗಿದ್ದಾನೆ ಎಂದು ನನಗೆ ಅನಿಸುತ್ತಿದೆ ಎಂದರು.

ಇದನ್ನೂ ಓದಿ: ದೆಹಲಿ ಸೇರಿ ಉತ್ತರ ಭಾರತದಲ್ಲಿ ಭೂಕಂಪ: ಆತಂಕದಿಂದ ಮನೆಯಿಂದ ಹೊರಬಂದ ಜನರು

ಸುರಂಗದೊಳಗೆ 5 ದಿನಗಳ ಕಾಲ ಸಿಕ್ಕಿಬಿದ್ದ ಎಲ್ಲ ಜನರು ಇನ್ನೂ ಜೀವಂತವಾಗಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಹೇಗಾದರೂ ಅವರೆಲ್ಲ ಜೀವಂತವಾಗಿ ಹೊರಬಂದರೆ ಅದು ದೇವರ ಪವಾಡವಾಗಿರುತ್ತದೆ.

ABOUT THE AUTHOR

...view details