ಕರ್ನಾಟಕ

karnataka

ETV Bharat / bharat

ಉತ್ತರಾಖಂಡ ಸಿಎಂ ತಿರಥ್​​​ ​​ಸಿಂಗ್ ರಾವತ್​ಗೆ ಕೋವಿಡ್: ಟ್ವೀಟ್​ ಮಾಡಿ ಸ್ಪಷ್ಟನೆ - Uttarakhand CM

ನನ್ನ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಯಾವುದೇ ಸಮಸ್ಯೆ ಇಲ್ಲ, ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆಯಂತೆ ಐಸೋಲೇಷನ್​ಗೆ ಒಳಗಾಗಿದ್ದೇನೆ ಎಂದು ಉತ್ತರಾಖಂಡದ ನೂತನ ಮುಖ್ಯಮಂತ್ರಿ ತಿರಥ್​​​ ​​ಸಿಂಗ್ ರಾವತ್ ಟ್ವೀಟ್​ ಮಾಡಿದ್ದಾರೆ.

Tirath Singh Rawat
ಉತ್ತರಾಖಂಡ ಸಿಎಂ ತಿರಥ್​​​ ​​ಸಿಂಗ್ ರಾವತ್​ಗೆ ಕೋವಿಡ್

By

Published : Mar 22, 2021, 1:35 PM IST

ಡೆಹ್ರಾಡೂನ್‌: ಉತ್ತರಾಖಂಡದ ನೂತನ ಮುಖ್ಯಮಂತ್ರಿ ತಿರಥ್​​​ ​​ಸಿಂಗ್ ರಾವತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿರುವ ಸಿಎಂ ತಿರಥ್​​​ ​​ಸಿಂಗ್, ನನ್ನ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಯಾವುದೇ ಸಮಸ್ಯೆ ಇಲ್ಲ, ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆಯಂತೆ ಐಸೋಲೇಷನ್​ಗೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹರಿದ ಜೀನ್ಸ್ ಬಗ್ಗೆ ಸಿಎಂ ಟೀಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ​ಆಕ್ರೋಶ

ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರು ದಯವಿಟ್ಟು ಎಚ್ಚರದಿಂದಿರಿ, ಕೋವಿಡ್​ ಪರೀಕ್ಷಗೆ ಒಳಗಾಗಿ. ಪ್ರತಿಯೊಬ್ಬರೂ ಆರೋಗ್ಯದಿಂದರಲಿ ಎಂದು ನಾನು ಬಯಸುತ್ತೇನೆಂದು ಸಿಎಂ ಟ್ವೀಟ್​ ಮಾಡಿದ್ದಾರೆ.

ತ್ರಿವೇಂದ್ರ ಸಿಂಗ್ ರಾವತ್ ಬಳಿಕ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಥ್​​​ ​​ಸಿಂಗ್ ರಾವತ್ ಅವರು ಮಾರ್ಚ್​ 10ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ABOUT THE AUTHOR

...view details