ಕರ್ನಾಟಕ

karnataka

By

Published : Nov 11, 2020, 11:32 PM IST

Updated : Nov 12, 2020, 6:20 AM IST

ETV Bharat / bharat

ಸಚಿವ ಡಾ.ಹರಕ್ ಸಿಂಗ್ ರಾವತ್​ಗೆ 3 ತಿಂಗಳು ಜೈಲು ಶಿಕ್ಷೆ: ರುದ್ರಪ್ರಯಾಗ್ ನ್ಯಾಯಾಲಯದ ಆದೇಶ

2012 ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರಾಖಂಡ ಸಚಿವ ಡಾ.ಹರಕ್ ಸಿಂಗ್ ರಾವತ್ ಮತ್ತು ಅವರ ಬೆಂಬಲಿಗರ ವಿರುದ್ಧ, ಸರ್ಕಾರಿ ನೌಕರರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಇದೀಗ ರುದ್ರಪ್ರಯಾಗ್ ಜಿಲ್ಲಾ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 1,000 ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ಸಚಿವ ಡಾ.ಹರಕ್ ಸಿಂಗ್ ರಾವತ್
ಸಚಿವ ಡಾ.ಹರಕ್ ಸಿಂಗ್ ರಾವತ್

ಡೆಹ್ರಾಡೂನ್:ಉತ್ತರಾಖಂಡದ ಸಚಿವ ಡಾ.ಹರಕ್ ಸಿಂಗ್ ರಾವತ್ ಅವರಿಗೆ ರುದ್ರಪ್ರಯಾಗ್​ನ ಜಿಲ್ಲಾ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಜೊತೆಗೆ 1,000 ರೂ. ದಂಡ ಹಾಕಿ ಆದೇಶ ನೀಡಿದೆ.

2012ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರ ಜೊತೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಈ ಶಿಕ್ಷೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ಜೊತೆ ಹರಕ್​ ಸಿಂಗ್​ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಡಾ. ರಾವತ್ ಮತ್ತು ಅವರ ಬೆಂಬಲಿಗರರು ಪ್ರಕರಣ ದಾಖಲಿಸಿದ್ರು.

ಈ ಪ್ರಕರಣವು ಕಳೆದ ಎಂಟು ವರ್ಷಗಳಿಂದ ರುದ್ರಪ್ರಯಾಗ್ ನ್ಯಾಯಾಲಯದಲ್ಲಿತ್ತು. ಆದರೆ ಮೇಲ್ಮನೆ ಅವಧಿಯವರೆಗೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

Last Updated : Nov 12, 2020, 6:20 AM IST

ABOUT THE AUTHOR

...view details