ಕರ್ನಾಟಕ

karnataka

By ETV Bharat Karnataka Team

Published : Sep 5, 2023, 7:47 PM IST

ETV Bharat / bharat

ಉಪವಾಸ ವ್ರತ ಮಾಡಿದರೂ ಈಡೇರದ ಮದುವೆ ಆಸೆ: ದೇವಸ್ಥಾನದಿಂದ ಶಿವಲಿಂಗ ಕದ್ದ ಯುವಕ!

UP youth steals Shivling: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆ ಆಸೆ ಈಡೇರಲಿಲ್ಲ ಎಂಬ ಕಾರಣದಿಂದ ದೇವಸ್ಥಾನದಿಂದ ಶಿವಲಿಂಗ ಕದ್ದಿದ್ದಾನೆ. ಸದ್ಯ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

UP youth steals Shivling after his wish for marriage not fulfilled
ಉಪವಾಸ ವ್ರತ ಮಾಡಿದರೂ ಈಡೇರದ ಮದುವೆ ಆಸೆ: ದೇವಸ್ಥಾನದಿಂದ ಶಿವಲಿಂಗ ಕದ್ದ ಯುವಕ

ಕೌಶಾಂಬಿ (ಉತ್ತರ ಪ್ರದೇಶ): ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಜನತೆ ದೇವರ ಮೊರೆ ಹೋಗುತ್ತಾರೆ. ಹಲವು ಸಂದರ್ಭದಲ್ಲಿ ತಾವು ಅಂದುಕೊಂಡಿದ್ದ ನೆರವೇರಿದ ಕಾರಣ ದೇವರಿಗೆ ಹರಕೆಯನ್ನೂ ಜನರು ತೀರಿಸುತ್ತಾರೆ. ಆದರೆ, ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆಯಾಗುವ ಆಸೆ ಈಡೇರಲಿಲ್ಲ ಎಂಬ ಕೋಪದಲ್ಲಿ ದೇವರ ಶಿವಲಿಂಗವನ್ನೇ ಕದ್ದು ಹೊಲದಲ್ಲಿ ಬಚ್ಚಿಟ್ಟಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಮಹೇವ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, 27 ವರ್ಷದ ಯುವಕ ಕುಮ್ಹಿಯಾವಾಹ ಬಜಾರ್‌ನಲ್ಲಿರುವ ಭೈರೋ ಬಾಬಾ ದೇವಸ್ಥಾನಲ್ಲಿನ ಶಿವಲಿಂಗ ಕಳ್ಳತನ ಮಾಡಿದ್ದಾನೆ. ಇತರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಶಿವಲಿಂಗ ಕಂಡು ಬಂದಿಲ್ಲ. ಇದರಿಂದ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರಿಗೆ ಭಕ್ತರು ವಿಷಯ ಮುಟ್ಟಿಸಿದ್ದಾರೆ. ಅಲ್ಲದೇ, ಇದೇ ವಿಷಯವಾಗಿ ಗ್ರಾಮದ ಮುಖಂಡ ಓಂಪ್ರಕಾಶ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ, ಭಾನುವಾರ ಕುಮ್ಹಿಯಾವಾಹ ಗ್ರಾಮದಲ್ಲೇ ಛೋಟು ಎಂಬ ಯುವಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿ ಛೋಟು ಶಿವಲಿಂಗ ಕದ್ದ ವಿಷಯವನ್ನು ಒಪ್ಪಿಕೊಂಡಿದ್ದಾನೆ. ಶಿವಲಿಂಗವನ್ನು ಹೊಲವೊಂದರಲ್ಲಿ ಎಲೆಗಳು ಮತ್ತು ಬಿದಿರುಗಳ ರಾಶಿಯ ಅಡಿ ಮರೆಮಾಚಲಾಗಿತ್ತು ಎಂದು ಮಹೇವ ಘಾಟ್ ಪೊಲೀಸ್ ಠಾಣಾಧಿಕಾರಿ ರಜನಿಕಾಂತ್ ಹೇಳಿದ್ದಾರೆ.

ಸದ್ಯ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 379ರ ಅಡಿ ಕಳ್ಳತನದ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ. ಶ್ರಾವಣ ಮಾಸದಲ್ಲಿ ಮನಃಪೂರ್ವಕವಾಗಿ ಈ ಯುವಕ ದೇವರಿಗೆ ಪ್ರಾರ್ಥಿಸುತ್ತಿದ್ದ. ಅಲ್ಲದೇ, ಉಪವಾಸ ವ್ರತ ಕೂಡ ಮಾಡುತ್ತಿದ್ದ. ಆದರೂ ತನ್ನ ಮದುವೆಯ ಆಸೆಯನ್ನು ಈಡೇರದ ಕಾರಣ ಶಿವದೇವನ ಬಗ್ಗೆ ಅಸಮಾಧಾನಗೊಂಡಿದ್ದ ಎಂದು ಹೇಳಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ:ಗಂಗಾವತಿ: ವಾಣಿ ವೀರಭದ್ರೇಶ್ವರ ದೇವಸ್ಥಾನದ ಶಿವಲಿಂಗ ಹೊತ್ತೊಯ್ದ ಕಳ್ಳರು!

ಇದೇ ಆಗಸ್ಟ್​ 24ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶಿವಲಿಂಗವನ್ನು ಕಳ್ಳರು ಕದ್ದೊಯ್ದ ಪ್ರಕರಣ ಬೆಳಕಿಗೆ ಬಂದಿತ್ತು. ಗ್ರಾಮದ ಸಮೀಪ ನಿರ್ಜನ ಹಾಗೂ ಬೆಟ್ಟದ ಕಡಿದಾದ ಪ್ರದೇಶದಲ್ಲಿರುವ ಪುರಾತನ ಕಾಲದ ವಾಣಿ ವೀರಭದ್ರೇಶ್ವರ ದೇವಸ್ಥಾನದಲ್ಲಿದ್ದ ಈ ಘಟನೆ ನಡೆದಿತ್ತು.

ದೇವಸ್ಥಾನದಲ್ಲಿ ಬೆಳಗ್ಗೆ ಅರ್ಚಕರು ಪೂಜೆ ಸಲ್ಲಿಸಿ, ಮಧ್ಯಾಹ್ನದ ಹೊತ್ತಿಗೆ ಮರಳಿ ಗಂಗಾವತಿಗೆ ಬರುತ್ತಾರೆ. ದೇಗುಲದ ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು ಕಳ್ಳತನ ಮಾಡಿದ್ದರು. ಆಗಸ್ಟ್​ 24ರಂದು ಎಂದಿನಂತೆ ಬೆಳಗ್ಗೆ ಅರ್ಚಕ ಪೂಜೆಗೆ ಆಗಮಿಸಿದ್ದ ಸಂದರ್ಭದಲ್ಲಿ ಶಿವಲಿಂಗ ಕಾಣೆಯಾಗಿತ್ತು. ಆಗ ಅರ್ಚಕರು ಗಂಗಾವತಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.

ಇದನ್ನೂ ಓದಿ:ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಮೊತ್ತದ ಚೆಕ್ ಹಾಕಿದ ವ್ಯಕ್ತಿಯ ಬ್ಯಾಂಕ್‌ ಖಾತೆಯಲ್ಲಿದ್ದಿದ್ದು 17 ರೂಪಾಯಿ!

ABOUT THE AUTHOR

...view details