ಕರ್ನಾಟಕ

karnataka

ETV Bharat / bharat

ಲಿಫ್ಟ್​ ನೆಪದಲ್ಲಿ ಯುವತಿಗೆ ಕಿರುಕುಳ.. ಚಲಿಸುತ್ತಿದ್ದ ಟ್ರಕ್​ನಿಂದ ಹುಡುಗಿಯನ್ನು ಹೊರ ಎಸೆದ ಚಾಲಕ!

ಉತ್ತರಪ್ರದೇಶದ ಮಥುರಾದಲ್ಲಿ ದುರಂತ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯೊಬ್ಬಳನ್ನು ಚಾಲಕ ಚಲಿಸುತ್ತಿದ್ದ ಟ್ರಕ್‌ನಿಂದ ಎಸೆದಿರುವ ಘಟನೆ ಮಥುರಾದಲ್ಲಿ ಕಂಡು ಬಂದಿದೆ.

By

Published : Aug 8, 2022, 9:10 AM IST

Woman thrown out of truck  Woman thrown out of truck for resisting molestation  Woman thrown out of truck in Uttar Pradesh  Uttar Pradesh crime  Etv Bharat Karnataka news  Etv Bharat Kannada news  ಉತ್ತರಪ್ರದೇಶದ ಮಥುರಾದಲ್ಲಿ ದುರಂತ ಘಟನೆ  ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ವಿರೋಧ  ಲಿಫ್ಟ್​ ನೆಪದಲ್ಲಿ ಯುವತಿಗೆ ಕಿರುಕುಳ
ಲಿಫ್ಟ್​ ನೆಪದಲ್ಲಿ ಯುವತಿಗೆ ಕಿರುಕುಳ

ಮಥುರಾ(ಉತ್ತರಪ್ರದೇಶ): ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ವಿರೋಧ ವ್ಯಕ್ತಪಡಿಸಿದಕ್ಕಾಗಿ ಚಲಿಸುತ್ತಿದ್ದ ಟ್ರಕ್​ನಿಂದ ಯುವತಿಯನ್ನು ಚಾಲಕನೊಬ್ಬ ಎಸೆದಿರುವ ಘಟನೆ ಇಲ್ಲಿನ ಛತ್ತರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ನಡೆದಿದೆ.

Uttar Pradesh crime:ಕೋಸಿಯಿಂದ ಮಥುರಾ ಕಡೆಗೆ ಟ್ರಕ್ ಅತಿವೇಗದಲ್ಲಿ ಹೋಗುತ್ತಿತ್ತು. ಈ ವೇಳೆ ಯುವತಿ ಟ್ರಕ್‌ನ ಕಿಟಕಿಯಿಂದ ಅರ್ಧಕ್ಕೆ ನೇತಾಡುತ್ತಿರುವುದನ್ನು ಕೆಲವರು ನೋಡಿ ಪ್ರಾಣ ಉಳಿಸುವುದಕ್ಕೆ ವಾಹನವನ್ನು ಹಿಂಬಾಲಿಸಿದ್ದಾರೆ. ಚೇತಕ್ ಅಕಾಡೆಮಿ ಬಳಿ ಟ್ರಕ್​ ತಲುಪಿದ ತಕ್ಷಣ ಯುವತಿ ಜಿಗಿದಿದ್ದಾಳೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿ ಶ್ರೀಶ್​ ಚಂದ್ರ, ಚೇತಕ್ ಅಕಾಡೆಮಿ ಬಳಿ ಯುವತಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯುವತಿಯನ್ನು ಕೆಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ತಾನು ಆಗ್ರಾ ನಿವಾಸಿ ಎಂದು ಯುವತಿ ಹೇಳಿದ್ದಾಳೆ. ಮಾಹಿತಿ ಪ್ರಕಾರ, ಯುವತಿ ಟ್ರಕ್ಕರ್‌ನಿಂದ ಲಿಫ್ಟ್ ತೆಗೆದುಕೊಂಡಿದ್ದಳು.

ಬಳಿಕ ಚಾಲಕ ಯುವತಿ ಮೆಲೆ ದೌರ್ಜನ್ಯ ಎಸೆಗಲು ಯತ್ನಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಗ ಚಲಿಸುತ್ತಿದ್ದ ಟ್ರಕ್​ನಿಂದ ಚಾಲಕ ಹೊರ ದೂಡಿದ್ದಾನೆ. ಈ ವೇಳೆ ಯುವತಿಟ್ರಕ್‌ನ ಬಾಗಿಲದ ಕಿಟಕಿಯಿಂದ ಅರ್ಧಕ್ಕೆ ನೇತಾಡುತ್ತಿರುವುದನ್ನು ಸ್ಥಳೀಯರು ಗಮನಿಸಿ ವಾಹನವನ್ನು ಹಿಂಬಾಲಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಚೇತಕ್ ಅಕಾಡೆಮಿ ಬಳಿ ಟ್ರಕ್​ ತಲುಪಿದ ತಕ್ಷಣ ಯುವತಿ ಜಿಗಿದಿದ್ದಾಳೆ. ಚಲಿಸುತ್ತಿದ್ದ ಟ್ರಕ್​ನಿಂದ ಜಿಗಿದ ಪರಿಣಾಮ ಯುವತಿ ತಲೆಗೆ ಪೆಟ್ಟಾಗಿದೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಟ್ರಕ್ ಚಾಲಕ ಮತ್ತು ಟ್ರಕ್ ಅನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ಶ್ರೀಶ್​ ಚಂದ್ರ ಹೇಳಿದ್ದಾರೆ

ಓದಿ:ನಿಂತ ಟ್ರಕ್​ಗೆ ಕಾರು ಡಿಕ್ಕಿ: ತಿರುಪತಿಗೆ ತೆರಳುತ್ತಿದ್ದ ಐವರ ಸಾವು!



ABOUT THE AUTHOR

...view details