ಕರ್ನಾಟಕ

karnataka

UP Polls: ನಾಮಪತ್ರ ಸಲ್ಲಿಕೆಗೆ 'ಕಸರತ್ತು'.. ಓಡೋಡಿ ಬಂದು ಯುಪಿ ಸಚಿವನ ನಾಮಿನೇಷನ್

By

Published : Feb 5, 2022, 1:05 PM IST

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನೂ ಕೆಲವು ದಿನಗಳು ಬಾಕಿಯಿದ್ದರೂ, ಅಲ್ಲಿನ ಸಚಿವರೊಬ್ಬರು ಓಡಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

UP Polls: BJP Minister Upendra Tiwari runs for nomination
UP Polls: ನಾಮಪತ್ರ ಸಲ್ಲಿಕೆಗೆ 'ಕಸರತ್ತು'.. ಓಡಿ ಬಂದು ಯುಪಿ ಸಚಿವನ ನಾಮಿನೇಷನ್

ಬಲ್ಲಿಯಾ, ಉತ್ತರ ಪ್ರದೇಶ:ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ನಡೆಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ನಾಮಪತ್ರ ಸಲ್ಲಿಸುವ ಸಲುವಾಗಿಯೇ ಭಾರಿ 'ಕಸರತ್ತು' ನಡೆಸಿದ್ದಾರೆ. ಅದು ಬೇರಾರೂ ಅಲ್ಲ, ಉತ್ತರ ಪ್ರದೇಶ ಸರ್ಕಾರ ಕ್ರೀಡಾ ಸಚಿವರಾದ ಉಪೇಂದ್ರ ತಿವಾರಿ.

ಹೌದು, ಶುಕ್ರವಾರ ಉಪೇಂದ್ರ ತಿವಾರಿ ನಾಮಪತ್ರ ಸಲ್ಲಿಕೆಗಾಗಿ ರಸ್ತೆಯಲ್ಲಿ ಓಡಿ ಬಂದಿದ್ದಾರೆ. ಆ ದಿನದ ನಾಮಿನೇಷನ್ ಫೈಲ್ ಮಾಡಲು ಕೆಲವೇ ನಿಮಿಷಗಳು ಬಾಕಿ ಇರುವಂತೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಓಡಿ ಬಂದು ನಾಮಪತ್ರ ಸಲ್ಲಿಸಿದ ಸಚಿವ

ಫೆಫ್ನಾ ವಿಧಾನಸಭಾ ಕ್ಷೇತ್ರದಿಂದ ಉಪೇಂದ್ರ ತಿವಾರಿ ಸ್ಪರ್ಧೆ ನಡೆಸುತ್ತಿದ್ದು, ನಾಮಿನೇಷನ್ ಸಲ್ಲಿಕೆಗೆ ಇನ್ನೂ ಫೆಬ್ರವರಿ 11ರವರೆಗೆ ಸಮಯವಿದ್ದು, ಉಪೇಂದ್ರ ತಿವಾರಿ ಅವರು ಶುಕ್ರವಾರವೇ ನಾಮಪತ್ರ ಸಲ್ಲಿಕೆಗೆ ನಡೆಸಿದ ಕಸರತ್ತು ಜನರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ಸಂಸತ್​ನಲ್ಲಿ 'ಕರ್ನಾಟಕದ ಹಿಜಾಬ್' ಸದ್ದು: ಎಐಎಂಐಎಂ,ಡಿಎಂಕೆ - ಕಾಂಗ್ರೆಸ್​ ಸಂಸದರಿಂದ ತರಾಟೆ!

ABOUT THE AUTHOR

...view details