ಶಹಜಹಾನ್ಪುರ/ಉತ್ತರಪ್ರದೇಶ: ದೇಶದಲ್ಲಿ ಕೋವಿಡ್ 2ನೇ ಅಲೆಯ ಅಬ್ಬರಕ್ಕೆ ವೈದ್ಯಕೀಯ ಆಕ್ಸಿಜನ್ ಕೊರತೆಯುಂಟಾಗಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.
ಆಕ್ಸಿಜನ್ಗಾಗಿ ಅರಳಿ ಮರದ ಕೆಳಗೆ ಮಲಗಿದ ಜನ! - ಪೀಪಲ್ ಟ್ರೀ
ಉಸಿರಾಟದ ತೊಂದರೆ ಅನುಭವಿಸುತ್ತಿರುವ ಉತ್ತರಪ್ರದೇಶದ ಶಹಜಹಾನ್ಪುರದ ಜನ, ಇಲ್ಲಿನ ಅರಳಿ ಮರ( ಪೀಪಲ್ ಟ್ರೀ)ದ ಕೆಳಗೆ ಬಂದು ಮಲಗುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
tree
ಈ ಮಧ್ಯೆ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಅರಳಿ ಮರ ಸಾಕಷ್ಟು ಸುದ್ದಿಯಲ್ಲಿದೆ. ಏಕೆಂದರೆ ಉಸಿರಾಟದ ತೊಂದರೆ ಎದುರಿಸುತ್ತಿರುವ ಜನರು ಮತ್ತು ಆಸ್ಪತ್ರೆಗಳಲ್ಲಿ ದಾಖಲಾಗಲು ಸಾಧ್ಯವಾಗದ ಜನರು ಈಗ ಅರಳಿ ಮರದ ಕೆಳಗೆ ಮಲಗಿದ್ದಾರೆ.
ಜಿಲ್ಲೆಯ ಎರಡು ಕುಟುಂಬಗಳ ಒಟ್ಟು 6 ಮಂದಿ ಈ ರೀತಿ ಅರಳಿಮರದ ಕೆಳಗೆ ಬಂದು ಮಲಗಿದ್ದು, ಅರಳಿ ಮರದ ಆಮ್ಲಜನಕವನ್ನು ನೀಡುತ್ತದೆ ಹೀಗಾಗಿ ಈ ರೀತಿ ಮಲಗಿರುವುದಾಗಿ ಹೇಳುತ್ತಾರೆ.
Last Updated : May 3, 2021, 3:24 PM IST