ಕರ್ನಾಟಕ

karnataka

ETV Bharat / bharat

ಯುಪಿ ಸ್ಮಾರಕ ಹಗರಣ ಪ್ರಕರಣ: ನ. 2 ರಂದು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಕೋರ್ಟ್​ - ಮಾಯಾವತಿ ಸರ್ಕಾರದಲ್ಲಿ ಸ್ಮಾರಕ ಹಗರಣ

ಉತ್ತರ ಪ್ರದೇಶದಲ್ಲಿ ಮಾಯಾವತಿ, ಸಿಎಂ ಆಗಿದ್ದಾಗ ನಡೆದಿದ್ದ 1,410 ಕೋಟಿ ರೂಪಾಯಿ ಸ್ಮಾರಕ ಹಗರಣ ಪ್ರಕರಣದ ವಿಚಾರಣೆಯನ್ನು ಕೋರ್ಟ್​​ ಇದೇ ನವೆಂಬರ್​ 2 ರಂದು ವಿಚಾರಣೆ ನಡೆಸಲಿದೆ.

November 2
ಯುಪಿ ಸ್ಮಾರಕ ಹಗರಣ ಪ್ರಕರಣ

By

Published : Oct 28, 2021, 3:43 PM IST

ಲಖನೌ:ಮಾಯಾವತಿಯವರ ಆಡಳಿತ ಅವಧಿಯಲ್ಲಿ ಲಖನೌ ಮತ್ತು ನೋಯ್ಡಾದಲ್ಲಿ ನಡೆದ 1,410 ಕೋಟಿ ರೂಪಾಯಿ ಸ್ಮಾರಕ ಹಗರಣ ನಡೆದಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪ್ರಕರಣದಲ್ಲಿ 25 ಅಧಿಕಾರಿಗಳು ಮತ್ತು 32 ಒಕ್ಕೂಟದ ಮುಖ್ಯಸ್ಥರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ಪರಿಗಣಿಸಿ ಸಂಸದ - ಶಾಸಕ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ರೈ ಮುಂದಿನ ವಿಚಾರಣೆಯನ್ನು ನವೆಂಬರ್ 2 ರಂದು ನಿಗದಿಪಡಿಸಿದ್ದಾರೆ.

ಚಾರ್ಜ್​​ಶೀಟ್‌ನಲ್ಲಿ ಹೆಸರಿಸಲಾದ ಇಬ್ಬರು ಮಾಜಿ ಸಚಿವರಲ್ಲಿ ಬಾಬು ಸಿಂಗ್ ಕುಶ್ವಾಹಾ ಮತ್ತು ನಸಿಮುದ್ದೀನ್ ಸಿದ್ದಿಕಿ ಸೇರಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧಿಕಾರದಲ್ಲಿದ್ದಾಗ 2007 ಮತ್ತು 2011 ರ ನಡುವೆ ನೋಯ್ಡಾ ಮತ್ತು ಲಖನೌದಲ್ಲಿ ಸ್ಮಾರಕಗಳು ಮತ್ತು ಉದ್ಯಾನಗಳ ನಿರ್ಮಾಣಕ್ಕಾಗಿ ಮರಳುಗಲ್ಲು ಖರೀದಿಯಲ್ಲಿ ಭಾರಿ ಹಗರಣ ನಡೆದಿತ್ತು ಎಂದು ಆರೋಪಿಸಲಾಗಿತ್ತು.

ಬೆಲೆ ನಿಗದಿ ಮಾಡಲು ಅಧಿಕಾರಿಗಳೇ ಅಧಿಕಾರ ಪಡೆದಿರುವುದು ತನಿಖೆಯಲ್ಲೂ ಬಯಲಾಗಿದೆ.ಹೆಚ್ಚಿನ ಬೆಲೆ ನಿಗದಿ ಪಡಿಸಿ ಗುತ್ತಿಗೆಯನ್ನು ಪ್ರಾರಂಭಿಸಲಾಯಿತು. ಲಖನೌ ಮತ್ತು ನೋಯ್ಡಾದಲ್ಲಿ ಎರಡು ದೊಡ್ಡ ಉದ್ಯಾನವನಗಳನ್ನು ನಿರ್ಮಿಸಲಾಯಿತು, ಅದರಲ್ಲಿ ಪಕ್ಷದ ಚುನಾವಣಾ ಚಿಹ್ನೆ ಆನೆ ಮತ್ತು ಅಂದಿನ ಮುಖ್ಯಮಂತ್ರಿ ಮಾಯಾವತಿ, ಬಿಎಸ್​​ಪಿ ಸಂಸ್ಥಾಪಕ ಕಾನ್ಶಿರಾಮ್ ಮತ್ತು ಭಾರತರತ್ನ ಡಾ. ಸಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಸೇರಿ ನೂರಾರು ಪ್ರತಿಮೆಗಳನ್ನು ಸ್ಥಾಪಿಸಲಾಯಿತು.ಆಗ ಮಾಯಾವತಿ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷದ ನಾಯಕರು ವ್ಯಾಪಕವಾಗಿ ಟೀಕಿಸಿದರು.

ಹಗರಣದ ವರದಿಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ.ಮೆಹ್ರೋತ್ರಾ ಅಂದಿನ ರಾಜ್ಯಪಾಲರಿಗೆ ಸಲ್ಲಿಸಿದ ಬಳಿಕ ಹಗರಣ ಬೆಳಕಿಗೆ ಬಂತು. ಆ ಬಳಿಕ, ಲೋಕಾಯುಕ್ತರ ಶಿಫಾರಸಿನ ಮೇರೆಗೆ ಸ್ಮಾರಕಗಳ ನಿರ್ಮಾಣದಲ್ಲಿ 1,400 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಬಿಐ ಅಥವಾ ಎಸ್‌ಐಟಿಗೆ ಹಗರಣದ ಬಗ್ಗೆ ವಿಸ್ತೃತ ತನಿಖೆಗೆ ಸಮಾಜವಾದಿ ಪಕ್ಷದ ಸರ್ಕಾರ ಶಿಫಾರಸು ಮಾಡಿತ್ತು.

2014 ರಲ್ಲಿ, ಅಂದಿನ ಸಮಾಜವಾದಿ ಪಾರ್ಟಿ ಸರ್ಕಾರವು ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಪೊಲೀಸರ ವಿಜಿಲೆನ್ಸ್ ಎಸ್ಟಾಬ್ಲಿಷ್ಮೆಂಟ್​ (ವಿಜಿಲೆನ್ಸ್) ಗೆ ವಹಿಸಿತ್ತು.ಆದರೆ, ನಾಲ್ಕು ವರ್ಷಗಳಲ್ಲಿ ವಿಜಿಲೆನ್ಸ್ ತನಿಖೆ ನಿಧಾನಗತಿಯಲ್ಲಿ ಸಾಗಿತು. ಅಲಹಾಬಾದ್ ಹೈಕೋರ್ಟ್ ಮಧ್ಯಪ್ರವೇಶಿಸಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನಿಖೆಯನ್ನು ಚುರುಕುಗೊಳಿಸುವಂತೆ ವಿಜಿಲೆನ್ಸ್ ಇಲಾಖೆಗೆ ಸೂಚಿಸಿದರು.

ನಂತರ ಆಗಿನ ಬಿಎಸ್‌ಪಿ ಸರ್ಕಾರದ ಮಾಜಿ ಸಚಿವ ನಸೀಮುದ್ದೀನ್‌ ಸಿದ್ದಿಕಿ ಅವರನ್ನು ವಿಚಾರಣೆ ನಡೆಸಿತ್ತು.ಅವರ ಹೇಳಿಕೆಯನ್ನು ಆಧರಿಸಿ, ವಿಜಿಲೆನ್ಸ್ ಮಾಜಿ ಸಚಿವ ಬಾಬು ಸಿಂಗ್ ಕುಶ್ವಾಹಾ ಅವರಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ವಿಚಾರಣೆಗೆ ಕರೆದಿತ್ತು. ವಿಜಿಲೆನ್ಸ್ ನ ಎಲ್ಲ ಪ್ರಶ್ನೆಗಳಿಗೂ ನಸೀಮುದ್ದೀನ್ ಸಿದ್ದಿಕಿ ಉತ್ತರ ನೀಡಿದ್ದರು. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details