ಬಲರಾಮ್ಪುರ /ಉತ್ತರ ಪ್ರದೇಶ:ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯ ಪತ್ರಕರ್ತ ರಾಕೇಶ್ ಸಿಂಗ್ ನಿರ್ಭಿಕ್ ಮತ್ತು ಅವರ ಸ್ನೇಹಿತ ಬೆಂಕಿಗಾಹುತಿಯಾಗಿರುವ ಘಟನೆ ಉತ್ತರ ಪ್ರದೇಶದ ಬಲರಾಮಪುರದ ನಡೆದಿದೆ.
ಪತ್ರಕರ್ತನ ಮನೆಗೆ ಬೆಂಕಿ: ಸ್ಥಳೀಯ ರಿಪೋರ್ಟರ್ ಸಾವು
ಉತ್ತರ ಪ್ರದೇಶದ ಬಲರಾಮಪುರದಲ್ಲಿ ಸ್ಥಳೀಯ ಪತ್ರಕರ್ತ ಮನೆಗೆ ಬೆಂಕಿ ಹಾಕಿದ್ದು, ಪತ್ರಕರ್ತ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ಮೃತ ಪತ್ರಕರ್ತನ ಪತ್ನಿಗೆ ಜಿಲ್ಲಾಡಳಿತವು 5 ಲಕ್ಷ ರೂ.ಗಳ ಚೆಕ್ ನೀಡಿದೆ.
ಸ್ಥಳೀಯ ಪತ್ರಕರ್ತ ಬೆಂಕಿಗಾಹುತಿ
ಘಟನೆ ನಡೆದಾಗ ಪತ್ರಕರ್ತನ ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದರು. ಇನ್ನು ಘಟನೆ ಕುರಿತು ತನಿಖೆ ನಡೆಸಲು ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಇನ್ನು ಮೃತ ಪತ್ರಕರ್ತನ ಪತ್ನಿಗೆ ಜಿಲ್ಲಾಡಳಿತವು 5 ಲಕ್ಷ ರೂಗಳ ಪರಿಹಾರ ನೀಡಿದ್ದು, ಬಲರಾಂಪುರ್ ಸಕ್ಕರೆ ಕಾರ್ಖಾನೆಯಲ್ಲಿ ಆಕೆಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.