ಕರ್ನಾಟಕ

karnataka

By

Published : Nov 30, 2020, 8:35 AM IST

ETV Bharat / bharat

ಪತ್ರಕರ್ತನ ಮನೆಗೆ ಬೆಂಕಿ: ಸ್ಥಳೀಯ ರಿಪೋರ್ಟರ್​ ಸಾವು

ಉತ್ತರ ಪ್ರದೇಶದ ಬಲ​ರಾಮ​ಪುರದಲ್ಲಿ ಸ್ಥಳೀಯ ಪತ್ರಕರ್ತ ಮನೆಗೆ ಬೆಂಕಿ ಹಾಕಿದ್ದು, ಪತ್ರಕರ್ತ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ಮೃತ ಪತ್ರಕರ್ತನ ಪತ್ನಿಗೆ ಜಿಲ್ಲಾಡಳಿತವು 5 ಲಕ್ಷ ರೂ.ಗಳ ಚೆಕ್ ನೀಡಿದೆ.

Journalist burnt to death in Balrampur
ಸ್ಥಳೀಯ ಪತ್ರಕರ್ತ ಬೆಂಕಿಗಾಹುತಿ

ಬಲರಾಮ್​ಪುರ /ಉತ್ತರ ಪ್ರದೇಶ:ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯ ಪತ್ರಕರ್ತ ರಾಕೇಶ್ ಸಿಂಗ್ ನಿರ್ಭಿಕ್ ಮತ್ತು ಅವರ ಸ್ನೇಹಿತ ಬೆಂಕಿಗಾಹುತಿಯಾಗಿರುವ ಘಟನೆ ಉತ್ತರ ಪ್ರದೇಶದ ಬಲ​ರಾಮ​ಪುರದ ನಡೆದಿದೆ.

ಘಟನೆ ನಡೆದಾಗ ಪತ್ರಕರ್ತನ ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದರು. ಇನ್ನು ಘಟನೆ ಕುರಿತು ತನಿಖೆ ನಡೆಸಲು ನಾಲ್ಕು ವಿಶೇಷ ಪೊಲೀಸ್​ ತಂಡಗಳನ್ನು ರಚಿಸಲಾಗಿದ್ದು, ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಇನ್ನು ಮೃತ ಪತ್ರಕರ್ತನ ಪತ್ನಿಗೆ ಜಿಲ್ಲಾಡಳಿತವು 5 ಲಕ್ಷ ರೂಗಳ ಪರಿಹಾರ ನೀಡಿದ್ದು, ಬಲರಾಂಪುರ್ ಸಕ್ಕರೆ ಕಾರ್ಖಾನೆಯಲ್ಲಿ ಆಕೆಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.

ABOUT THE AUTHOR

...view details