ಇಟಾ(ಉತ್ತರ ಪ್ರದೇಶ):ಢಾಬಾವೊಂದರಲ್ಲಿ ಚೆನ್ನಾಗಿ ತಿಂದು ಪೊಲೀಸ್ ಅಧಿಕಾರಿಗಳಿಬ್ಬರು ಬಿಲ್ ನೀಡಲು ಹಿಂದೇಟು ಹಾಕಿದ್ದು, ಈ ವೇಳೆ ಪ್ರಶ್ನೆ ಮಾಡಿರುವ 10 ಜನರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿ ಬಂಧಿಸಿ, ಜೈಲಿಗಟ್ಟಿದ್ದಾರೆ.
ಉತ್ತರ ಪ್ರದೇಶ ಇಟಾದ ಕೊಟ್ವಾಲಿ ಗ್ರಾಮೀಣ ಪೊಲೀಸ್ ಠಾಣೆಯ ಸಂತೋಷ್ ಕುಮಾರ್ ಮತ್ತು ಶೈಲೇಂದ್ರ ಯಾದವ್ ಎಂಬ ಇಬ್ಬರು ಪೊಲೀಸರು ಈ ಕೃತ್ಯ ಕೈಗೊಂಡಿದ್ದಾರೆ. ಊಟ ಸೇವನೆ ಮಾಡಿದ ಬಳಿಕ ಹಣ ಪಾವತಿ ಮಾಡಲು ನಿರಾಕರಿಸಿದ್ದು, ಇದು ವಾಗ್ವಾದಕ್ಕೆ ಕಾರಣವಾಗಿದೆ. ಹೀಗಾಗಿ ಅಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ವಿರುದ್ಧ ನಕಲಿ ಗ್ಯಾಂಗ್ ಲೂಟಿ ಪ್ರಕರಣ ದಾಖಲು ಮಾಡಿ, ಜೈಲಿಗೆ ಕಳುಹಿಸಿದ್ದಾರೆ.