ಬಿಲಾಸ್ಪುರ (ಛತ್ತೀಸ್ಗಢ): ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ಇಬ್ಬರು ವಯೋವೃದ್ಧರು ನಡೆಸಿದ ವಿಶಿಷ್ಟ ರೀತಿಯ ಪ್ರತಿಭಟನೆ ಜನರ ಗಮನ ಸೆಳೆಯುತ್ತಿದೆ. ಇದರಲ್ಲಿ ಓರ್ವ ವಯೋವೃದ್ಧ ಪ್ರತಿಭಟನಾಕಾರರೊಬ್ಬರು, ತಾವು ಕಳೆದುಕೊಂಡ ಜಮೀನಿನ ಮೇಲೆ ಹಕ್ಕು ಮತ್ತು ಸರ್ಕಾರಿ ಭೂಮಿ ದಾಖಲೆಗಳಲ್ಲಿ ನಮೂದು ಕೋರಿ ಜಮೀನಿನ ನಕ್ಷೆಯನ್ನು ಆಯತಾಕಾರದ ಬಟ್ಟೆಯ ಮೇಲೆ ಪ್ರದರ್ಶಿಸಿ, ಪ್ರತಿಭಟಿಸುತ್ತಿದ್ದಾರೆ.
ಬಿಲಾಸ್ಪುರ ನಗರದ ಸಮೀಪದಲ್ಲಿರುವ ಬಿರ್ಕೋನಾ ಗ್ರಾಮದ 80 ವರ್ಷದ ಲಾಟೆಲ್ರಾಮ್ ಯಾದವ್ ಅವರು, ಬಟ್ಟೆಯ ಮೇಲೆ ಮುದ್ರಿತವಾಗಿರುವ ತಮ್ಮ ಜಮೀನಿನ ನಕ್ಷೆಯನ್ನು ಹಿಡಿದುಕೊಂಡು, ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಗಳ್ಳರು ನಮ್ಮ ಜಮೀನಿನ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ, ನಾನು ಹೊಂದಿರುವ ಭೂಮಿಯನ್ನು ಸರ್ಕಾರವು ಹುಲ್ಲುಗಾವಲು ಪ್ರದೇಶ ಎಂದು ಘೋಷಿಸಿದೆ. ಕೆಲವು ಸರ್ಕಾರಿ ಅಧಿಕಾರಿಗಳು ಭೂಮಾಫಿಯಾದೊಂದಿಗೆ ಶಾಮೀಲಾಗಿ ಆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.