ಕರ್ನಾಟಕ

karnataka

ETV Bharat / bharat

73ನೇ ವಯಸ್ಸಿನಲ್ಲಿ ಸೈಕಲ್​ ಮೇಲೆ ಭಾರತ ಸಂಚರಿಸುವ ಉತ್ಸಾಹ.. 1500 ಕಿ.ಮೀ ಕ್ರಮಿಸಿ ಉಜ್ಜೈನಿ ತಲುಪಿದ ಪದ್ಮಶ್ರೀ ಪುರಸ್ಕೃತ! - ಉಜ್ಜೈನಿ ತಲುಪಿದ ಪದ್ಮಶ್ರೀ ಪುರಸ್ಕೃತ

ದೇಶದ ಯುವ ಪೀಳಿಗೆಗೆ ಸೈಕ್ಲಿಂಗ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 73ನೇ ಇಳಿ ವಯಸ್ಸಿನಲ್ಲಿ ಪದ್ಮಶ್ರೀ ಪುರಸ್ಕೃತರೊಬ್ಬರು ಬರೋಬ್ಬರಿ 1500 ಕಿಲೋ ಮೀಟರ್​​ ಕ್ರಮಿಸಿದ್ದಾರೆ.

Ujjain Padmashree Dr kiran seth
Ujjain Padmashree Dr kiran seth

By

Published : May 4, 2022, 5:50 PM IST

ಉಜ್ಜೈನಿ(ಮಧ್ಯ ಪ್ರದೇಶ):73ನೇ ಇಳಿ ವಯಸ್ಸಿನಲ್ಲೂ ದೇಶ ಸಂಚಾರ ಮಾಡುವ ಉತ್ಸಾಹದಿಂದ ದೆಹಲಿಯ ರಾಜ್​ಘಾಟ್​​ನಿಂದ ಸೈಕಲ್ ಯಾತ್ರೆ ಆರಂಭಿಸಿದ್ದ ಪದ್ಮಶ್ರೀ ಪುರಸ್ಕೃತ ಡಾ. ಕಿರಣ್ ಸೇಠ್ ಇದೀಗ 1500 ಕಿಲೋ ಮೀಟರ್ ಕ್ರಮಿಸಿ ಉಜ್ಜೈನಿ ತಲುಪಿದ್ದಾರೆ. ಯುವಕರಲ್ಲಿ ಸರಳತೆ ಮತ್ತು ಶಿಸ್ತಿನ ಸಂದೇಶ ನೀಡುವ ಉದ್ದೇಶದಿಂದ ಈ ಸಂಚಾರ ಆರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇದೀಗ ದೆಹಲಿ ಕಡೆ ಪ್ರಯಾಣ ಬೆಳೆಸಿರುವ ಪದ್ಮಶ್ರೀ ಪುರಸ್ಕೃತ ಒಟ್ಟು 2500 ಕಿಲೋ ಮೀಟರ್​ ದೂರ ಕ್ರಮಿಸಲಿದ್ದಾರೆ.

1500 ಕಿ.ಮೀ ಕ್ರಮಿಸಿ ಉಜ್ಜೈನಿ ತಲುಪಿದ ಪದ್ಮಶ್ರೀ ಪುರಸ್ಕೃತ..

ಪರಿಸರ, ಸಂಸ್ಕೃತಿ ಬಗ್ಗೆ ಪ್ರಚಾರ: ತಾವು ತಮ್ಮ ಪ್ರಯಾಣದ ವೇಳೆ ಪರಿಸರ ಹಾಗೂ ಸಂಸ್ಕೃತಿ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಸೈಕಲ್ ಸಂಚಾರದ ವೇಳೆ ಯಾವುದೇ ರೀತಿಯ ಆಧುನಿಕ ಸೈಕಲ್ ಬಳಕೆ ಮಾಡಿಲ್ಲ ಎಂದಿರುವ ಅವರು, ಡಿಸೆಂಬರ್ ತಿಂಗಳಲ್ಲಿ ಪಾಂಡಿಚೇರಿಯಿಂದ ಚೆನ್ನೈಗೆ ಸೈಕ್ಲಿಂಗ್ ಮಾಡಿರುವ ವಿಚಾರ ಸಹ ಹೊರಹಾಕಿದ್ದಾರೆ.

ಇದನ್ನೂ ಓದಿ:ಹಾಲು ಸಾಗಾಣಿಕೆಗೆ 'ದೇಸಿ ಫೆರಾರಿ ಕಾರು'.. ತಯಾರಿಸಿದ ವ್ಯಕ್ತಿಯ ಭೇಟಿಗೆ ಮುಂದಾದ ಮಹೀಂದ್ರಾ!

2022ರ ಮಾರ್ಚ್​ 11ರಂದು ದೆಹಲಿಯ ರಾಜ್​ಘಾಟ್​​ನಿಂದ ತಮ್ಮ ಸೈಕಲ್ ಪ್ರಯಾಣ ಆರಂಭಿಸಿದ್ದ ಪದ್ಮಶ್ರೀ ಪುರಸ್ಕೃತ ಡಾ. ಕಿರಣ್ ಸೇಠ್​,ಭಾರತದ ಭವ್ಯ ಪರಂಪರೆ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಅಲ್ವಾರ್​, ಜೈಪುರ್, ಅಜ್ಮೀರ್​, ಭಿಲ್ವಾರಾ, ಚಿತ್ತೋರ್​ಗಢ, ಅಹಮದಾಬಾದ್​, ಬರೋಡಾ, ದಾಹೋದ್​, ಗೋಧ್ರಾದಲ್ಲಿ ಸಂಚರಿಸಿದ್ದಾರೆ. ಇದೀಗ ಮಧ್ಯಪ್ರದೇಶದ ಉಜ್ಜೈನಿಗೆ ಆಗಮಿಸಿದ್ದು, ಮೂರು ದಿನಗಳ ಕಾಲ ಇಲ್ಲಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಸುಮಾರು 50 ದಿನಗಳ ಸಂಚಾರದಲ್ಲಿ ನಿತ್ಯ 40ರಿಂದ 45 ಕಿಲೋ ಮೀಟರ್​ ಪ್ರಯಾಣಿಸಿದ್ದಾಗಿ ಇವರು ಹೇಳಿಕೊಂಡಿದ್ದು, ಪರಿಸರ ಗಮನದಲ್ಲಿಟ್ಟುಕೊಂಡು ಸೈಕ್ಲಿಂಗ್​​ ಮಹತ್ವದ ಬಗ್ಗೆ ಸಹ ತಿಳಿಸಲಾಗಿದೆ ಎಂದರು.

ABOUT THE AUTHOR

...view details