ಕರ್ನಾಟಕ

karnataka

By ETV Bharat Karnataka Team

Published : Nov 24, 2023, 12:41 PM IST

Updated : Nov 24, 2023, 12:50 PM IST

ETV Bharat / bharat

ವಿಮಾನ ಹಾರಾಟದ ವೇಳೆ ತುರ್ತು ನಿರ್ಗಮನ ಬಾಗಿಲು​ ತೆರೆಯಲು ಯತ್ನ; ಕರ್ನಾಟಕದ ಇಬ್ಬರ ಬಂಧನ

Two passengers held for attempting to open plane emergency door: ವಿಮಾನದ ಎಮೆರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ ಕರ್ನಾಟಕದ ಇಬ್ಬರು ಪ್ರಯಾಣಿಕರನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ.

Two Passengers Onboard  Two passengers were arrested  Open emergency door  Ramoji Korayil and Ramesh Kumar  Emergency door  ಕರ್ನಾಟಕದ ಇಬ್ಬರ ಬಂಧನ  ಎಮೆರ್ಜೆನ್ಸಿ ಡೋರ್​ ತೆರೆಯಲು ಯತ್ನ  ರನ್ನಿಂಗ್​ ವಿಮಾನದ ಎಮೆರ್ಜೆನ್ಸಿ ಬಾಗಿಲು ತೆರೆ  ಪೊಲೀಸರು ಬಂಧಿಸಿರುವ ಘಟನೆ  ನೆಡುಂಬಶ್ಶೇರಿ ವಿಮಾನ ನಿಲ್ದಾಣ  ವಿಮಾನ ಚಲಿಸುತ್ತಿದ್ದ ವೇಳೆ ಎಮೆರ್ಜೆನ್ಸಿ ಬಾಗಿಲು ತೆರೆ
ಎಮೆರ್ಜೆನ್ಸಿ ಡೋರ್​ ತೆರೆಯಲು ಯತ್ನ

ಎರ್ನಾಕುಲಂ(ಕೇರಳ): ವಿಮಾನ ಚಲಿಸುತ್ತಿದ್ದ ಸಂದರ್ಭದಲ್ಲಿ ತುರ್ತು ನಿರ್ಗಮನ ಬಾಗಿಲು ತೆರೆಯಲೆತ್ನಿಸಿದ ಇಬ್ಬರು ಪ್ರಯಾಣಿಕರನ್ನು ಇಲ್ಲಿನ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಬಂಧಿಸಲಾಗಿದೆ. ಬಂಧಿತರನ್ನು ರಾಮೋಜಿ ಕೊರೈಲ್ ಮತ್ತು ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕರ್ನಾಟಕದ ಮೂಲದವರಾಗಿದ್ದಾರೆ.

ಬೆಂಗಳೂರಿಗೆ ಹೊರಟಿದ್ದ ಅಲಯನ್ಸ್ ಏರ್ ವಿಮಾನದಲ್ಲಿ ಘಟನೆ ನಡೆದಿದೆ. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಆರೋಪಿಗಳು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ವಿಮಾನ ಸಂಸ್ಥೆಯ ಸಿಬ್ಬಂದಿ ಇಬ್ಬರನ್ನೂ ನೆಡುಂಬಶ್ಶೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾವು ತಪ್ಪಾಗಿ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿಯೇ ಹಲವು ಬಾರಿ ಬಾಗಿಲು ತೆರೆಯಲು ಯತ್ನಿಸಿದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ:ಮುಂಬೈ ಏರ್‌ಪೋರ್ಟ್‌ ಟರ್ಮಿನಲ್ 2ಗೆ ಸ್ಫೋಟ ಬೆದರಿಕೆ; ಬಿಟ್‌ಕಾಯಿನ್‌ ರೂಪದಲ್ಲಿ $1 ಮಿಲಿಯನ್‌ಗೆ ಬೇಡಿಕೆ

Last Updated : Nov 24, 2023, 12:50 PM IST

ABOUT THE AUTHOR

...view details