ಕರ್ನಾಟಕ

karnataka

ದೆಹಲಿಯಲ್ಲಿ ಎನ್‌ಕೌಂಟರ್‌: ಇಬ್ಬರು ಕ್ರಿಮಿನಲ್​ಗಳ ಹೊಡೆದುರುಳಿಸಿದ ಪೊಲೀಸರು

By

Published : Aug 12, 2021, 10:50 AM IST

ಬೆಳ್ಳಂಬೆಳಗ್ಗೆಯೇ ಇಬ್ಬರು ಅಪರಾಧಿಗಳನ್ನು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಿರುವ ದೆಹಲಿ ಪೊಲೀಸರು, ನಗದು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

Two criminals killed in police encounter in Delhi's Khajuri Khas
ಎನ್​ಕೌಂಟರ್​​ನಲ್ಲಿ ಇಬ್ಬರು ಕ್ರಿಮಿನಲ್​ಗಳ ಹತೈಗೈದ ರಾಷ್ಟ್ರ ರಾಜಧಾನಿ ಪೊಲೀಸರು

ನವದೆಹಲಿ:ದೆಹಲಿಯ ಖಜೂರಿ ಖಾಸ್ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಪೊಲೀಸ್ ಎನ್​ಕೌಂಟರ್​ನಲ್ಲಿ ಇಬ್ಬರು ಅಪರಾಧಿಗಳನ್ನು ಹತ್ಯೆ ಮಾಡಲಾಗಿದೆ. ಈ ಜೋಡಿ ಕ್ರಿಮಿನಲ್​ಗಳು ಅನೇಕ ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಮೀರ್ ಖಾನ್ ಮತ್ತು ರಾಜ್ ಮಾನ್ ಮೃತ ಅಪರಾಧಿಗಳಾಗಿದ್ದು, ಇವರಿಂದ 1.5 ಲಕ್ಷ ನಗದು, 2 ಸ್ವಯಂಚಾಲಿತ ಪಿಸ್ತೂಲ್, 4 ಮ್ಯಾಗಜೀನ್ ಮತ್ತು 15 ಲೈವ್ ಕಾರ್ಟ್ರಿಡ್ಜ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಗುಂಡಿನ ಚಕಮಕಿ ವೇಳೆ ಇಬ್ಬರು ಪೊಲೀಸ್ ಕಾನ್​ಸ್ಟೇಬಲ್​ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಖಜೂರಿ ಖಾಸ್ ಪ್ರದೇಶದ ಶ್ರೀರಾಮ ಕಾಲೋನಿಯಲ್ಲಿ ಅಡಗಿಕೊಂಡಿದ್ದ ನಿಖರ ಮಾಹಿತಿಯ ಮೇರೆಗೆ ಅಪರಾಧಿಗಳನ್ನು ಶರಣಾಗುವಂತೆ ಕೇಳಲು ಹೋದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ಹೊಡೆದುರುಳಿಸಿದ್ದಾರೆ.

ABOUT THE AUTHOR

...view details